<p><strong>ಗುರುಮಠಕಲ್:</strong> ಕುರಿ ಕಳ್ಳರೆಂದು ಶಂಕಿಸಿ ಗ್ರಾಮದಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>ಹತ್ತಿರದ ಚಂಡ್ರಿಕಿ ಗ್ರಾಮದ ಮೊಗಲಪ್ಪ ಗೊಲ್ಲ, ರಾಜು ವಿಶ್ವಕರ್ಮ(ನಾಗೇಂದ್ರಪ್ಪ), ರಮೇಶ ಬಸೂದೆ, ಹುಸೇನಪ್ಪ ಇಂಟೆನಿಕಿ, ಹುಸೇನಪ್ಪ ನಾಟೇಕರ, ತ್ರಿವೇಶ ಕಲಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಪ್ರಕರಣ: ಜಿಲ್ಲೆಯ ವಡಗೆರಾ ತಾಲ್ಲೂಕಿನ ಉಳ್ಳೆಸೂಗೂರು ತಾಂಡಾದ ಲಕ್ಷ್ಮಣ ರಾಠೋಡ, ರೆಡ್ಡಿ ರಾಠೋಡ, ಶಂಕರ್ ರಾಠೋಡ, ವಿಜಯ ಪವಾರ್ ಮತ್ತು ಭರತ್ ಪವಾರ್ ಶನಿವಾರ ತಡರಾತ್ರಿ ಗುರುಮಠಕಲ್- ಚಂಡ್ರಿಕಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಕಾಡು ಹಂದಿ ಬೇಟೆಯಾಡಲು ಬಂದಿದ್ದರು.</p>.<p>ಚಂಡ್ರಿಕಿ ಗ್ರಾಮದ ಹೊರವಲಯದಲ್ಲಿ ತಮ್ಮ ಬೈಕ್ ನಿಲ್ಲಿಸಿದಾಗ ಕಾರ್ನಲ್ಲಿ ಬಂದ ಮೊಗುಲಪ್ಪ ಹಾಗೂ ತಂಡ ಇವರನ್ನು ಕುರಿ ಕಳ್ಳರೆಂದು ಶಂಕಿಸಿದ್ದಾರೆ. ಲಕ್ಷ್ಮಣ ರಾಠೋಡ ಮತ್ತು ರೆಡ್ಡಿ ರಾಠೋಡನ್ನು ಬಿಟ್ಟು ಉಳಿದವರು ತಮ್ಮ ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ.</p>.<p>‘ಕೂಡಲೇ ಲಕ್ಷ್ಮಣ ಮತ್ತು ರೆಡ್ಡಿ ರಾಠೋಡ ಅವರನ್ನು ಹಿಡಿದು ಗ್ರಾಮದ ಹನುಮ ಮಂದಿರದ ಹತ್ತಿರದ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದು, ಫೋನ್ ಪೇ ನಲ್ಲಿದ್ದ ₹10 ಸಾವಿರ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ’ ಎಂದು ಲಕ್ಷ್ಮಣ ರಾಠೋಡ ನೀಡಿದ ದೂರಿನಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್:</strong> ಕುರಿ ಕಳ್ಳರೆಂದು ಶಂಕಿಸಿ ಗ್ರಾಮದಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>ಹತ್ತಿರದ ಚಂಡ್ರಿಕಿ ಗ್ರಾಮದ ಮೊಗಲಪ್ಪ ಗೊಲ್ಲ, ರಾಜು ವಿಶ್ವಕರ್ಮ(ನಾಗೇಂದ್ರಪ್ಪ), ರಮೇಶ ಬಸೂದೆ, ಹುಸೇನಪ್ಪ ಇಂಟೆನಿಕಿ, ಹುಸೇನಪ್ಪ ನಾಟೇಕರ, ತ್ರಿವೇಶ ಕಲಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಪ್ರಕರಣ: ಜಿಲ್ಲೆಯ ವಡಗೆರಾ ತಾಲ್ಲೂಕಿನ ಉಳ್ಳೆಸೂಗೂರು ತಾಂಡಾದ ಲಕ್ಷ್ಮಣ ರಾಠೋಡ, ರೆಡ್ಡಿ ರಾಠೋಡ, ಶಂಕರ್ ರಾಠೋಡ, ವಿಜಯ ಪವಾರ್ ಮತ್ತು ಭರತ್ ಪವಾರ್ ಶನಿವಾರ ತಡರಾತ್ರಿ ಗುರುಮಠಕಲ್- ಚಂಡ್ರಿಕಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಕಾಡು ಹಂದಿ ಬೇಟೆಯಾಡಲು ಬಂದಿದ್ದರು.</p>.<p>ಚಂಡ್ರಿಕಿ ಗ್ರಾಮದ ಹೊರವಲಯದಲ್ಲಿ ತಮ್ಮ ಬೈಕ್ ನಿಲ್ಲಿಸಿದಾಗ ಕಾರ್ನಲ್ಲಿ ಬಂದ ಮೊಗುಲಪ್ಪ ಹಾಗೂ ತಂಡ ಇವರನ್ನು ಕುರಿ ಕಳ್ಳರೆಂದು ಶಂಕಿಸಿದ್ದಾರೆ. ಲಕ್ಷ್ಮಣ ರಾಠೋಡ ಮತ್ತು ರೆಡ್ಡಿ ರಾಠೋಡನ್ನು ಬಿಟ್ಟು ಉಳಿದವರು ತಮ್ಮ ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ.</p>.<p>‘ಕೂಡಲೇ ಲಕ್ಷ್ಮಣ ಮತ್ತು ರೆಡ್ಡಿ ರಾಠೋಡ ಅವರನ್ನು ಹಿಡಿದು ಗ್ರಾಮದ ಹನುಮ ಮಂದಿರದ ಹತ್ತಿರದ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದು, ಫೋನ್ ಪೇ ನಲ್ಲಿದ್ದ ₹10 ಸಾವಿರ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ’ ಎಂದು ಲಕ್ಷ್ಮಣ ರಾಠೋಡ ನೀಡಿದ ದೂರಿನಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>