<p>ಯರಗೋಳ: ಗ್ರಾಮದ ಹೊರವಲಯದ ತಪಾಸಣೆ ಕೇಂದ್ರದಲ್ಲಿ ಹೊರ ರಾಜ್ಯದಿಂದ ಆಗಮಿಸುವ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈ ತಪಾಸಣೆ ಕೇಂದ್ರದಿಂದ ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯದಿಂದ ನೂರಾರು ಸಂಖ್ಯೆಯ ಬೃಹತ್ ವಾಹನಗಳು ಸಂಚರಿಸುತ್ತವೆ.</p>.<p>ತಪಾಸಣೆ ಕೇಂದ್ರಕ್ಕೆ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಬೇಟಿ ನೀಡಿ ವಾಹನಗಳ ತಪಾಸಣೆ ಮಾಡಿದ್ದಾರೆ. ಆರೋಗ್ಯ, ಕಂದಾಯ, ಪೊಲೀಸ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಿದ್ದಾರೆ.</p>.<p>ಹೊರ ರಾಜ್ಯದಿಂದ ಬರುವ ವಾಹನ ಚಾಲಕರಿಗೆ 3 ದಿನದ ಒಳಗಡೆ ತಪಾಸಣೆ ಮಾಡಿಸಿದ ಕೋವಿಡ್ ನೆಗಟಿವ್ ವರದಿ ತೋರಿಸುವಂತೆ ಆದೇಶಿಸಲಾಗಿದೆ. ಇದರಿಂದಾಗಿ ಪೋಲಿಸ್ ಮತ್ತು ವಾಹನ ಚಾಲಕರ ನಡುವೆ ಮಾತಿನ ಚಕಮಕಿ ಸಾಮಾನ್ಯವಾಗಿ ಕಂಡುಬಂತು.</p>.<p>ಈ ಮಧ್ಯೆ, ಯರಗೋಳ ಚೆಕ್ಪೋಸ್ಟ್ ಬಳಿ ರಾಜಸ್ಥಾನದಿಂದ ಬಂದ ಗೂಡ್ಸ್ ಲಾರಿಯೊಂದನ್ನು ನಿಲ್ಲಿಸಲು ಸೂಚಿಸಿದಾಗ, ಲಾರಿ ಚಾಲಕ, ಲಾರಿ ಅತಿವೇಗದಿಂದ ಚಲಾಯಿಸಿ ಕರ್ತವ್ಯ ನಿರತ ಪೇದೆಯ ಮೇಲೆಯೇ ಹಾಯಿಸಲು ಹೋಗಿದ್ದ ಎನ್ನಲಾದ ಸುದ್ದಿಗಳು ಕೆಲಕಾಲ ಆತಂಕ ಮೂಡಿಸಿದ್ದವು.</p>.<p>ಈ ಕುರಿತು 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ, ಅಂತಹ ಯಾವುದೆ ಘಟನೆ ನಡೆದಿಲ್ಲ, ನಾನು ಸ್ಥಳದಲ್ಲಿಯೇ ಇದ್ದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯರಗೋಳ: ಗ್ರಾಮದ ಹೊರವಲಯದ ತಪಾಸಣೆ ಕೇಂದ್ರದಲ್ಲಿ ಹೊರ ರಾಜ್ಯದಿಂದ ಆಗಮಿಸುವ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈ ತಪಾಸಣೆ ಕೇಂದ್ರದಿಂದ ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯದಿಂದ ನೂರಾರು ಸಂಖ್ಯೆಯ ಬೃಹತ್ ವಾಹನಗಳು ಸಂಚರಿಸುತ್ತವೆ.</p>.<p>ತಪಾಸಣೆ ಕೇಂದ್ರಕ್ಕೆ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಬೇಟಿ ನೀಡಿ ವಾಹನಗಳ ತಪಾಸಣೆ ಮಾಡಿದ್ದಾರೆ. ಆರೋಗ್ಯ, ಕಂದಾಯ, ಪೊಲೀಸ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಿದ್ದಾರೆ.</p>.<p>ಹೊರ ರಾಜ್ಯದಿಂದ ಬರುವ ವಾಹನ ಚಾಲಕರಿಗೆ 3 ದಿನದ ಒಳಗಡೆ ತಪಾಸಣೆ ಮಾಡಿಸಿದ ಕೋವಿಡ್ ನೆಗಟಿವ್ ವರದಿ ತೋರಿಸುವಂತೆ ಆದೇಶಿಸಲಾಗಿದೆ. ಇದರಿಂದಾಗಿ ಪೋಲಿಸ್ ಮತ್ತು ವಾಹನ ಚಾಲಕರ ನಡುವೆ ಮಾತಿನ ಚಕಮಕಿ ಸಾಮಾನ್ಯವಾಗಿ ಕಂಡುಬಂತು.</p>.<p>ಈ ಮಧ್ಯೆ, ಯರಗೋಳ ಚೆಕ್ಪೋಸ್ಟ್ ಬಳಿ ರಾಜಸ್ಥಾನದಿಂದ ಬಂದ ಗೂಡ್ಸ್ ಲಾರಿಯೊಂದನ್ನು ನಿಲ್ಲಿಸಲು ಸೂಚಿಸಿದಾಗ, ಲಾರಿ ಚಾಲಕ, ಲಾರಿ ಅತಿವೇಗದಿಂದ ಚಲಾಯಿಸಿ ಕರ್ತವ್ಯ ನಿರತ ಪೇದೆಯ ಮೇಲೆಯೇ ಹಾಯಿಸಲು ಹೋಗಿದ್ದ ಎನ್ನಲಾದ ಸುದ್ದಿಗಳು ಕೆಲಕಾಲ ಆತಂಕ ಮೂಡಿಸಿದ್ದವು.</p>.<p>ಈ ಕುರಿತು 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ, ಅಂತಹ ಯಾವುದೆ ಘಟನೆ ನಡೆದಿಲ್ಲ, ನಾನು ಸ್ಥಳದಲ್ಲಿಯೇ ಇದ್ದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>