<p><strong>ಸೈದಾಪುರ:</strong> ‘ಯುವಕರು ತಮ್ಮ ಮತದಾನದ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸಬೇಕು’ ಎಂದು ಪ್ರಭಾರ ಉಪತಹಸೀಲ್ದಾರ್ ದಸ್ತಗಿರಿ ನಾಯಕ ಹೇಳಿದರು.</p>.<p>ಪಟ್ಟಣದ ವಿದ್ಯಾವರ್ಧಕ ಸಂಸ್ಥೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡ ‘ರಾಷ್ಟ್ರೀಯ ಮತದಾರರ ದಿನ’ ಆಚರಣೆ ಪ್ರತಿಜ್ಞಾನವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. </p>.<p>‘ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತಿಳಿವಳಿಕೆಯಿಂದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ಬಳಸಲಾಗುತ್ತದೆ. ಮತದಾರರು ತಮ್ಮ ಅಮೂಲ್ಯವಾದ ಮತವನ್ನು ದೇಶದ ಹಿತವನ್ನು ಕಾಯುವ ಹಾಗೂ ಶಿಕ್ಷಣವಂತ ನಾಗರಿಕರಿಗೆ ನೀಡಿ ಅವರನ್ನು ಆರಿಸಿ ತರಬೇಕು’ ಎಂದರು.</p>.<p>‘ಮತವನ್ನು ಕೇವಲ ಹಣ, ಬಟ್ಟೆ, ಬಂಗಾರ, ಮದ್ಯಪಾನಗಳಿಗೆ ಮಾರಿಕೊಳ್ಳದೆ ಪ್ರಗತಿಗರ ಸಹಕರಿಸುವವರಿಗೆ ನೀಡಿ. ಯುವಕರು ತಮ್ಮ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸುವುದು ಮತ್ತು ಇತರರನ್ನು ಸಹ ಹಾಗೆ ಮಾಡಲು ಪ್ರೇರೇಪಿಸಬೇಕು’ ಎಂದರು.</p>.<p>ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಮಡಿವಾಳಪ್ಪ, ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಹಿರಿಯ ಶಿಕ್ಷಕ ಗೂಳಪ್ಪ, ಎಸ್.ಮಲ್ಹಾರ, ಹಣಮರೆಡ್ಡಿ ಮೋಟ್ನಳ್ಳಿ, ಸಂಗಾರೆಡ್ಡಿ ಪಾಟೀಲ, ಶೋಭಾ ಸೇರಿದಂತೆ ಇತರರಿದ್ದರು.</p>
<p><strong>ಸೈದಾಪುರ:</strong> ‘ಯುವಕರು ತಮ್ಮ ಮತದಾನದ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸಬೇಕು’ ಎಂದು ಪ್ರಭಾರ ಉಪತಹಸೀಲ್ದಾರ್ ದಸ್ತಗಿರಿ ನಾಯಕ ಹೇಳಿದರು.</p>.<p>ಪಟ್ಟಣದ ವಿದ್ಯಾವರ್ಧಕ ಸಂಸ್ಥೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡ ‘ರಾಷ್ಟ್ರೀಯ ಮತದಾರರ ದಿನ’ ಆಚರಣೆ ಪ್ರತಿಜ್ಞಾನವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. </p>.<p>‘ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತಿಳಿವಳಿಕೆಯಿಂದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ಬಳಸಲಾಗುತ್ತದೆ. ಮತದಾರರು ತಮ್ಮ ಅಮೂಲ್ಯವಾದ ಮತವನ್ನು ದೇಶದ ಹಿತವನ್ನು ಕಾಯುವ ಹಾಗೂ ಶಿಕ್ಷಣವಂತ ನಾಗರಿಕರಿಗೆ ನೀಡಿ ಅವರನ್ನು ಆರಿಸಿ ತರಬೇಕು’ ಎಂದರು.</p>.<p>‘ಮತವನ್ನು ಕೇವಲ ಹಣ, ಬಟ್ಟೆ, ಬಂಗಾರ, ಮದ್ಯಪಾನಗಳಿಗೆ ಮಾರಿಕೊಳ್ಳದೆ ಪ್ರಗತಿಗರ ಸಹಕರಿಸುವವರಿಗೆ ನೀಡಿ. ಯುವಕರು ತಮ್ಮ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸುವುದು ಮತ್ತು ಇತರರನ್ನು ಸಹ ಹಾಗೆ ಮಾಡಲು ಪ್ರೇರೇಪಿಸಬೇಕು’ ಎಂದರು.</p>.<p>ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಮಡಿವಾಳಪ್ಪ, ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಹಿರಿಯ ಶಿಕ್ಷಕ ಗೂಳಪ್ಪ, ಎಸ್.ಮಲ್ಹಾರ, ಹಣಮರೆಡ್ಡಿ ಮೋಟ್ನಳ್ಳಿ, ಸಂಗಾರೆಡ್ಡಿ ಪಾಟೀಲ, ಶೋಭಾ ಸೇರಿದಂತೆ ಇತರರಿದ್ದರು.</p>