ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಚಿನ್ನಾಕಾರ ಗ್ರಾಮದಲ್ಲಿ ಸೋಮವಾರ 8 ಜನರಲ್ಲಿ ಬೇಧಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.
ಈಚೆಗೆ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ವಾಂತಿ ಬೇಧಿಯಿಂದ ಮೂವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಗ್ರಾಮದಲ್ಲಿ 8 ಜನರಿಗೆ ಬೇಧಿಯಾಗಿದ್ದು, ಆತಂಕದ ವಿಷಯ ಎಂದು ಗ್ರಾಮಸ್ಥರು ಹೇಳಿದರು.
ಸೋಮವಾರ 8 ಜನರಿಗೆ ಬೇಧಿಯಾಗಿದೆ, ಯಾರಿಗೂ ವಾಂತಿಯಾಗಿಲ್ಲ. ಚಿಕಿತ್ಸೆ ಪಡೆದು ಆರು ಜನ ಗುಣಮುಖರಾಗಿದ್ದು, ಉಳಿದ ಇಬ್ಬರೂ ಸಂಜೆ ವೇಳೆಗೆ ಗುಣಮುಖರಾಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸಮಯದಲ್ಲಿ ನೀರು ಸರಬರಾಜು ಪೈಪ್ಲೈನ್ ಅಲ್ಲಲ್ಲಿ ಒಡೆದಿದ್ದು, ಅದನ್ನು ದುರಸ್ತಿಗೊಳಿಸದಿರುವುದೇ ಸಮಸ್ಯೆಗೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.