<p><strong>ಯರಗೋಳ (ಯಾದಗಿರಿ): </strong>ಗ್ರಾಮದ ವಾರ್ಡ್ ಸಂಖ್ಯೆ 4 ರಲ್ಲಿ ಶನಿವಾರ ರಾತ್ರಿ 8ಕ್ಕೆ ಫಾತೀಮಾ ಅಲ್ಲೂರು ಅವರಿಗೆ ಸೇರಿದ ಮನೆಯ ಮೇಲ್ಛಾವಣೆ ಕುಸಿದು, ವಿಸ್ಮಯ ರೀತಿಯಲ್ಲಿ ಮನೆಯಲ್ಲಿದ್ದವರು ಸಾವಿನ ದವಡೆಯಿಂದ ಪಾರಾಗಿದ್ದಾರೆ.ಈಚೆಗೆ ಗ್ರಾಮದಲ್ಲಿ ಜಿಟಿಜಿಟಿ ಮಳೆಯಾಗಿತ್ತು.</p>.<p>ಮನೆಯ ಒಡತಿ ಕೆಲಸವನ್ನು ಅರಸಿ ಮಕ್ಕಳೊಂದಿಗೆ ಹೈದರಾಬಾದ್ ಮಹಾನಗರಕ್ಕೆ ತೆರಳಿದ್ದರು. ಅದೇ ವಾರ್ಡ್ ನಿವಾಸಿ ಮಕೂಮಾ ಅವರು 15 ದಿನಗಳ ಹಿಂದೆ ಮನೆಯನ್ನು ಬಾಡಿಗೆ ಪಡೆದಿದ್ದರು. 4 ಮಕ್ಕಳೊಂದಿಗೆ ಮನೆಯ ಇನ್ನೊಂದು ಕೋಣೆಯಲ್ಲಿ ಊಟ ಮಾಡುತ್ತಿದ್ದರು. ಹೊರಗಡೆ ಕೋಣೆಯ ಮೇಲ್ಛಾವಣಿ ಜೋರಾದ ಸದ್ದಿನೊಂದಿಗೆ ಕುಸಿದಿದೆ. ಕೂಡಲೇ ಮನೆ ಸುತ್ತಲಿನ ಜನರು ಮನೆಯ ಒಳಕೋಣೆಯಲ್ಲಿದ್ದ ಮಹಿಳೆ, 4 ಮಕ್ಕಳನ್ನು ಹೊರ ತರಲು ಯಶಸ್ವಿಯಾದರು. ಪ್ರತಿದಿನಮೇಲ್ಛಾವಣೆ ಬಿದ್ದ ಕೋಣೆಯಲ್ಲಿ ಮಕ್ಕಳು ತಾಯಿ ಜೊತೆಯಲ್ಲಿ ಟಿವಿ ನೋಡುತ್ತ ಮಲಗುತ್ತಿದ್ದರು. ಸುತ್ತಲಿನ ಜನರು ಆಶ್ಚರ್ಯ ವ್ಯಕ್ತಪಡಿಸುತ್ತ 'ಪ್ರಜಾವಾಣಿ'ಗೆ ತಿಳಿಸಿದರು.</p>.<p>ದೇವರ ದಯೆಯಿಂದ ಯಾವುದೇ ಸಾವು ನೋವು ಆಗಿಲ್ಲ ಎಂದು ಸುತ್ತಲಿನ ಜನರು ನೆಮ್ಮದಿಯ ಉಸಿರು ಬಿಟ್ಟರು. ಶಂಕರ ಮಡಿವಾಳ, ಹಣಮಂತ ತಳವಾರ, ಸಾಬಣ್ಣ ಬಾನರ, ಇಬ್ರಾಹಿಂ, ಸಿದ್ದಪ್ಪ ಬಂದಳ್ಳಿ ಘಟನೆ ನಡೆದ ಸ್ಥಳದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ (ಯಾದಗಿರಿ): </strong>ಗ್ರಾಮದ ವಾರ್ಡ್ ಸಂಖ್ಯೆ 4 ರಲ್ಲಿ ಶನಿವಾರ ರಾತ್ರಿ 8ಕ್ಕೆ ಫಾತೀಮಾ ಅಲ್ಲೂರು ಅವರಿಗೆ ಸೇರಿದ ಮನೆಯ ಮೇಲ್ಛಾವಣೆ ಕುಸಿದು, ವಿಸ್ಮಯ ರೀತಿಯಲ್ಲಿ ಮನೆಯಲ್ಲಿದ್ದವರು ಸಾವಿನ ದವಡೆಯಿಂದ ಪಾರಾಗಿದ್ದಾರೆ.ಈಚೆಗೆ ಗ್ರಾಮದಲ್ಲಿ ಜಿಟಿಜಿಟಿ ಮಳೆಯಾಗಿತ್ತು.</p>.<p>ಮನೆಯ ಒಡತಿ ಕೆಲಸವನ್ನು ಅರಸಿ ಮಕ್ಕಳೊಂದಿಗೆ ಹೈದರಾಬಾದ್ ಮಹಾನಗರಕ್ಕೆ ತೆರಳಿದ್ದರು. ಅದೇ ವಾರ್ಡ್ ನಿವಾಸಿ ಮಕೂಮಾ ಅವರು 15 ದಿನಗಳ ಹಿಂದೆ ಮನೆಯನ್ನು ಬಾಡಿಗೆ ಪಡೆದಿದ್ದರು. 4 ಮಕ್ಕಳೊಂದಿಗೆ ಮನೆಯ ಇನ್ನೊಂದು ಕೋಣೆಯಲ್ಲಿ ಊಟ ಮಾಡುತ್ತಿದ್ದರು. ಹೊರಗಡೆ ಕೋಣೆಯ ಮೇಲ್ಛಾವಣಿ ಜೋರಾದ ಸದ್ದಿನೊಂದಿಗೆ ಕುಸಿದಿದೆ. ಕೂಡಲೇ ಮನೆ ಸುತ್ತಲಿನ ಜನರು ಮನೆಯ ಒಳಕೋಣೆಯಲ್ಲಿದ್ದ ಮಹಿಳೆ, 4 ಮಕ್ಕಳನ್ನು ಹೊರ ತರಲು ಯಶಸ್ವಿಯಾದರು. ಪ್ರತಿದಿನಮೇಲ್ಛಾವಣೆ ಬಿದ್ದ ಕೋಣೆಯಲ್ಲಿ ಮಕ್ಕಳು ತಾಯಿ ಜೊತೆಯಲ್ಲಿ ಟಿವಿ ನೋಡುತ್ತ ಮಲಗುತ್ತಿದ್ದರು. ಸುತ್ತಲಿನ ಜನರು ಆಶ್ಚರ್ಯ ವ್ಯಕ್ತಪಡಿಸುತ್ತ 'ಪ್ರಜಾವಾಣಿ'ಗೆ ತಿಳಿಸಿದರು.</p>.<p>ದೇವರ ದಯೆಯಿಂದ ಯಾವುದೇ ಸಾವು ನೋವು ಆಗಿಲ್ಲ ಎಂದು ಸುತ್ತಲಿನ ಜನರು ನೆಮ್ಮದಿಯ ಉಸಿರು ಬಿಟ್ಟರು. ಶಂಕರ ಮಡಿವಾಳ, ಹಣಮಂತ ತಳವಾರ, ಸಾಬಣ್ಣ ಬಾನರ, ಇಬ್ರಾಹಿಂ, ಸಿದ್ದಪ್ಪ ಬಂದಳ್ಳಿ ಘಟನೆ ನಡೆದ ಸ್ಥಳದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>