ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಸಿಡಿಲು ಬಡಿದು ಇಬ್ಬರು ಸಾವು

Last Updated 11 ಸೆಪ್ಟೆಂಬರ್ 2022, 2:29 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ದೇವತ್ಕಲ್ ಗ್ರಾಮದ ರಾಜು ಮಲ್ಲಿಕಾರ್ಜುನ ರಜಪೂತ (33) ಮತ್ತು ಚಿಕ್ಕನಳ್ಳಿ ಗ್ರಾಮದ ನಂದಮ್ಮ ನಿಂಗಪ್ಪ ಸಂಗವಾರ (40) ಇಬ್ಬರೂ ಸಿಡಿಲು ಬಡಿದು ಶನಿವಾರ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಘಟನೆ ನಡೆದಿದೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.

ದೇವಪುರ ಗ್ರಾಮದ ಮನೆಯೊಂದು ಸಂಪೂರ್ಣ ಕುಸಿದಿದೆ. ಅವಶೇಷದ ಅಡಿ ಸಿಲುಕಿ ಹಸುವೊಂದು ಗಂಭೀರ ಗಾಯಗೊಂಡಿದೆ. ಬೆನಕನಹಳ್ಳಿ ಗ್ರಾಮದ ಕಮಲಮ್ಮ ಹಣಮಂತ್ರಾಯ ಅವರಿಗೆ ಸೇರಿದ ಎರಡು ಮೇಕೆಗಳು ಸಿಡಿಲಿನಿಂದ ಮೃತ ಪಟ್ಟಿವೆ.
ನಗರ ಮತ್ತು ಸುತ್ತಮುತ್ತಲೂ ಮಧ್ಯಾಹ್ನದಿಂದ ನಿರಂತರ ಮಳೆ ಸುರಿಯುತ್ತಿದೆ. ತೆಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.ಜಮೀನುಗಳು ಜಲಾವೃತವಾಗಿವೆ. ವ್ಯಾಪಾರ, ವಹಿವಾಟು ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT