ಡಿ.30 ರಂದು ಮತ ಎಣಿಕೆ ನಡೆದಿದ್ದು, 16 ರಲ್ಲಿ 14 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಅಧ್ಯಕ್ಷ ಸ್ಥಾನದ ಮೇಲೆ ಎಲ್ಲರೂ ಕಣ್ಣಿಟ್ಟಿದ್ದು, ಮೀಸಲಾತಿ ಘೋಷಣೆಗಾಗಿ ಕಾಯುತ್ತಿದ್ದಾರೆ. ಚುನಾಯಿತ ಪುರ ಪಿತೃಗಳು ಪ್ರಮುಖರ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವ ಕೆಲಸ ಸದ್ದಿಲ್ಲದೆ ಮಾಡುತ್ತಿದ್ದಾರೆ. ಮಹಿಳಾ ಸದಸ್ಯೆಯರ ಕುಟುಂಬಸ್ಥರು ನಾಯಕರನ್ನು ಭೇಟಿ ಮಾಡಿ ಗೆಲುವಿಗೆ ಶ್ರಮಿಸಿದ ಎಲ್ಲರನ್ನೂ ಗೌರವಿಸುವ ಜೊತೆಯಲ್ಲಿ ಮೀಸಲಾತಿ ಬಂದಲ್ಲಿ ಅಧ್ಯಕ್ಷ ಸ್ಥಾನ ತಮ್ಮವರಿಗೆ ನೀಡಬೇಕು ಎಂದು ಲಾಬಿ ಮಾಡುತ್ತಿದ್ದಾರೆ.