<p><strong>ಯಾದಗಿರಿ:</strong> ಜ್ಞಾನ ವಿಕಾಸನದ ಕೇಂದ್ರಗಳಾದ ಗ್ರಂಥಾಲಯಗಳಿಗೆ ಓದುಗರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಸರ್ಕಾರಿ ನೌಕರಿ ಹಿಡಿದವರು ತಾವು ಓದಿದ್ದ ಪುಸ್ತಕಗಳ ರಾಶಿಯನ್ನು ಗ್ರಂಥಾಲಯಗಳಿಗೆ ದೇಣಿಗೆಯಾಗಿ ನೀಡಿ, ಅನ್ಯ ಆಕಾಂಕ್ಷಿಗಳ ಜ್ಞಾನ ಸಂಪಾದನೆಗೆ ಸೇತುವೆಯಾಗುತ್ತಿದ್ದಾರೆ.</p>.<p>ಹಲವು ಆಕರ್ಷಣೆಗಳು ನಡುವೆಯೂ ಗ್ರಂಥಾಲಯಗಳು ಓದುವ ಸಂಸ್ಕೃತಿಯನ್ನು ಜೀವಂತವಾಗಿ ಇರಿಸಿಕೊಂಡು ಸಾಗುತ್ತಿವೆ. ನಿತ್ಯ ಸಾವಿರಾರು ಓದುಗರು ಗ್ರಂಥಾಲಯಗಳಲ್ಲಿನ ದಿನ ಪತ್ರಿಕೆಗಳು, ಮ್ಯಾಗಜೀನ್, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಕೆಎಎಸ್, ಐಎಎಸ್ನ ಐಚ್ಛಿಕ ವಿಷಯಗಳ ಪುಸ್ತಕಗಳನ್ನು ಓದಿ ಸರ್ಕಾರಿ ನೌಕರಿ ಹಿಡಿದವರ ಪೈಕಿ ಕೆಲವರು ಗ್ರಂಥಾಲಯಗಳ ಋಣವನ್ನು ಪುಸ್ತಕಗಳನ್ನು ದೇಣಿಗೆಯಾಗಿ ನೀಡುವ ಮೂಲಕ ತೀರಿಸುತ್ತಿದ್ದಾರೆ.</p>.<p>ಗ್ರಂಥಾಲಯದಲ್ಲಿ ಗಂಟೆಗಟ್ಟಲೇ ಪತ್ರಿಕೆ, ಪುಸ್ತಕಗಳನ್ನು ಓದಿ ಶಿಕ್ಷಕರು, ಪೊಲೀಸ್ ಕಾನ್ಸ್ಟೆಬಲ್, ಸೈನಿಕರು, ಬ್ಯಾಂಕ್ ನೌಕರಿ ಸೇರಿ ಇತರೆ ನೌಕರಿಗಳನ್ನು ಹಲವರು ಗಿಟ್ಟಿಸಿಕೊಂಡಿದ್ದಾರೆ. ಗ್ರಂಥಾಲಯಗಳ ಪುಸ್ತಕಗಳ ಜೊತೆಗೆ ತಾವೂ ಸಾವಿರಾರು ರೂಪಾಯಿ ವ್ಯಯಿಸಿ ಬೇರೆ ಲೇಖಕರು ಬರೆದ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಿ ಮನೆಗಳಲ್ಲಿಯೂ ಓದಿದ್ದಾರೆ. ತಮ್ಮ ಓದಿನ ಬಳಿಕ ತಮ್ಮಂತೆ ಇತರರಿಗೂ ಅವುಗಳು ಸಹಾಯವಾಗಲಿ ಎಂದು ಮೂಟೆ ಕಟ್ಟಿಕೊಂಡು ಬಂದು ಸಾರ್ವಜನಿಕ ಗ್ರಂಥಾಲಯಗಳಿಗೆ ಕೊಟ್ಟಿದ್ದಾರೆ ಎನ್ನುತ್ತಾರೆ ಗ್ರಂಥಾಲಯದ ಸಹಾಯಕರು.</p>.<p>ಈಚೆಗೆ ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಯೊಬ್ಬರು ಎರಡು ಚೀಲಗಳಲ್ಲಿ 40ಕ್ಕೂ ಹೆಚ್ಚು ಪುಸ್ತಕಗಳನ್ನು ಹೊತ್ತುಕೊಂಡು ಬಂದು ಗ್ರಂಥಾಲಯದಲ್ಲಿ ಇರಿಸಿ ಹೋಗಿದ್ದಾರೆ. ಅದರಲ್ಲಿ ₹ 150ಯಿಂದ ಹಿಡಿದು ₹ 750ರ ಬೆಲೆವರೆಗಿನ ಪುಸ್ತಕಗಳಿವೆ.</p>.<p>ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳಿಗೆ ನೆರವಾಗುವಂತಹ ಐಚ್ಛಿಕ ವಿಷಯಗಳಾದ ‘ಭಾರತದ ಅರ್ಥವ್ಯವಸ್ಥೆ, ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ’, ‘ಸಾಮಾನ್ಯ ಅರ್ಥಶಾಸ್ತ್ರ’, ‘ಇಂಡಿಯನ್ ಪೊಲಿಟಿ’, ‘ಭಾರತದ ಸಂವಿಧಾನ ಮತ್ತು ರಾಜಕೀಯ’, ‘ಭಾರತದ ಅರ್ಥವ್ಯವಸ್ಥೆ’, ‘ಸಾರ್ವಜನಿಕ ಆಡಳಿತ ನಿರ್ವಹಣೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು’, ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ‘ಎಫ್ಡಿಎ & ಎಸ್ಡಿಎ’, ‘ಪರೀಕ್ಷಾ ಮಾರ್ಗದರ್ಶಿ’, ‘ಕಾನ್ ಬೂಸ್ಟರ್’, ‘ಸ್ಪರ್ಧಾ ಉನ್ನತಿ’ಯಂತಹ ಸಾವಿರಾರು ಪುಸ್ತಕಗಳು ದೇಣಿಗೆಯಾಗಿ ಗ್ರಂಥಾಲಯಗಳನ್ನು ಸೇರಿವೆ.</p>.<p>ದೇಣಿಗೆಯಾಗಿ ನೀಡುವ ಪದ್ಧತಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಬೆಳೆಯುತ್ತಿದೆ. ದೇಣಿಗೆಯಾಗಿ ಬಂದಂತಹ ಪುಸ್ತಕಗಳನ್ನು ಪರಿಶೀಲಿಸಿ ತೀರ ಹಳೆಯದಾದ ಪುಸ್ತಕಗಳನ್ನು ಪ್ರತ್ಯೇಕವಾಗಿ ಇರಿಸುತ್ತೇವೆ. ಅವುಗಳನ್ನು ಕೆಲವು ವಾರಗಳ ಮಟ್ಟಿಗೆ ಓದುಗರ ಕೈಯಲ್ಲಿ ಇರಿಸಿ, ಉತ್ತಮ ಪ್ರತಿಕ್ರಿಯೆ ಬಂದಂತಹ ಪುಸ್ತಕಗಳನ್ನು ದೇಣಿಗೆ ವಿಭಾಗದಲ್ಲಿ ನೋಂದಾಯಿಸಿ, ಕಪಾಟಿನಲ್ಲಿ ಇರಿಸುತ್ತೇವೆ ಎನ್ನುತ್ತಾರೆ ಗ್ರಂಥಾಲಯದ ನೌಕರ.</p>.<div><blockquote>ನಮಗೂ ಸಿಗದಂತಹ ಉತ್ತಮವಾದ ಪುಸ್ತಕಗಳು ದೇಣಿಗೆಯ ರೂಪದಲ್ಲಿ ಗ್ರಂಥಾಲಯದ ಓದುಗರಿಗೆ ಲಭ್ಯವಾಗುತ್ತಿವೆ. ಪರೀಕ್ಷೆಯಲ್ಲಿ ಕೇಳುವ ಮಹತ್ವದ ವಿಷಯಗಳನ್ನು ಮಾರ್ಕ್ ಮಾಡಿದ್ದು ಆಕಾಂಕ್ಷಿಗಳಿಗೆ ನೆರವಾಗುತ್ತಿದೆ</blockquote><span class="attribution"> ಜಯಪ್ರಕಾಶ ಮುಖ್ಯ ಗ್ರಂಥಪಾಲಕ</span></div>.<h2>150ಕ್ಕೂ ಹೆಚ್ಚು ಪುಸ್ತಕಗಳು ದಾನ </h2>.<p>‘ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಹೋಗಿದ್ದೆ. ಉತ್ತಮ ಪುಸ್ತಕಗಳಿಗಾಗಿ ಪರದಾಡುತ್ತಿದ್ದವರ ಕಷ್ಟವನ್ನು ಕಣ್ಣಾರೆ ಕಂಡಿದ್ದೆ. ಪ್ರತಿಭೆ ಇದ್ದೂ ಖರೀದಿಸಲು ಆಗದವರ ತೊಳಲಾಟವೂ ನೀಡಿದ್ದೆ. ಬಡ ಪ್ರತಿಭಾನ್ವಿತರ ಅನುಕೂಲಕ್ಕಾಗಿ ನನ್ನ ಬಳಿ ಇದ್ದ 150ಕ್ಕೂ ಹೆಚ್ಚು ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದ್ದೇನೆ’ ಎಂದು ಜೆಸ್ಕಾಂ ಯಾದಗಿರಿ ಉಪವಿಭಾಗದ ಕಚೇರಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಂಬಿಕಾ ಶ್ರೀಮಂತ ಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗುವ ಅತ್ಯುತ್ತಮವಾದ ಪುಸ್ತಕಗಳನ್ನು ಕೆಲವು ಬರಹಗಾರರು ಪುಸ್ತಕಗಳ ಮಳಿಗೆಗಳಿಗೆ ನೀಡುವುದಿಲ್ಲ. ನೇರವಾಗಿ ಆಕಾಂಕ್ಷಿಗಳಿಗೆ ಮಾರುತ್ತಾರೆ. ಅಂತಹ ಪುಸ್ತಕಗಳು ನಮ್ಮ ಭಾಗದ ಆಕಾಂಕ್ಷಿಗಳಿಗೆ ಸಹಾಯಕ್ಕೆ ಬರಲೆಂದು ಇಚ್ಛಿಸಿ ಕೊಟ್ಟಿದ್ದೇನೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಜ್ಞಾನ ವಿಕಾಸನದ ಕೇಂದ್ರಗಳಾದ ಗ್ರಂಥಾಲಯಗಳಿಗೆ ಓದುಗರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಸರ್ಕಾರಿ ನೌಕರಿ ಹಿಡಿದವರು ತಾವು ಓದಿದ್ದ ಪುಸ್ತಕಗಳ ರಾಶಿಯನ್ನು ಗ್ರಂಥಾಲಯಗಳಿಗೆ ದೇಣಿಗೆಯಾಗಿ ನೀಡಿ, ಅನ್ಯ ಆಕಾಂಕ್ಷಿಗಳ ಜ್ಞಾನ ಸಂಪಾದನೆಗೆ ಸೇತುವೆಯಾಗುತ್ತಿದ್ದಾರೆ.</p>.<p>ಹಲವು ಆಕರ್ಷಣೆಗಳು ನಡುವೆಯೂ ಗ್ರಂಥಾಲಯಗಳು ಓದುವ ಸಂಸ್ಕೃತಿಯನ್ನು ಜೀವಂತವಾಗಿ ಇರಿಸಿಕೊಂಡು ಸಾಗುತ್ತಿವೆ. ನಿತ್ಯ ಸಾವಿರಾರು ಓದುಗರು ಗ್ರಂಥಾಲಯಗಳಲ್ಲಿನ ದಿನ ಪತ್ರಿಕೆಗಳು, ಮ್ಯಾಗಜೀನ್, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಕೆಎಎಸ್, ಐಎಎಸ್ನ ಐಚ್ಛಿಕ ವಿಷಯಗಳ ಪುಸ್ತಕಗಳನ್ನು ಓದಿ ಸರ್ಕಾರಿ ನೌಕರಿ ಹಿಡಿದವರ ಪೈಕಿ ಕೆಲವರು ಗ್ರಂಥಾಲಯಗಳ ಋಣವನ್ನು ಪುಸ್ತಕಗಳನ್ನು ದೇಣಿಗೆಯಾಗಿ ನೀಡುವ ಮೂಲಕ ತೀರಿಸುತ್ತಿದ್ದಾರೆ.</p>.<p>ಗ್ರಂಥಾಲಯದಲ್ಲಿ ಗಂಟೆಗಟ್ಟಲೇ ಪತ್ರಿಕೆ, ಪುಸ್ತಕಗಳನ್ನು ಓದಿ ಶಿಕ್ಷಕರು, ಪೊಲೀಸ್ ಕಾನ್ಸ್ಟೆಬಲ್, ಸೈನಿಕರು, ಬ್ಯಾಂಕ್ ನೌಕರಿ ಸೇರಿ ಇತರೆ ನೌಕರಿಗಳನ್ನು ಹಲವರು ಗಿಟ್ಟಿಸಿಕೊಂಡಿದ್ದಾರೆ. ಗ್ರಂಥಾಲಯಗಳ ಪುಸ್ತಕಗಳ ಜೊತೆಗೆ ತಾವೂ ಸಾವಿರಾರು ರೂಪಾಯಿ ವ್ಯಯಿಸಿ ಬೇರೆ ಲೇಖಕರು ಬರೆದ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಿ ಮನೆಗಳಲ್ಲಿಯೂ ಓದಿದ್ದಾರೆ. ತಮ್ಮ ಓದಿನ ಬಳಿಕ ತಮ್ಮಂತೆ ಇತರರಿಗೂ ಅವುಗಳು ಸಹಾಯವಾಗಲಿ ಎಂದು ಮೂಟೆ ಕಟ್ಟಿಕೊಂಡು ಬಂದು ಸಾರ್ವಜನಿಕ ಗ್ರಂಥಾಲಯಗಳಿಗೆ ಕೊಟ್ಟಿದ್ದಾರೆ ಎನ್ನುತ್ತಾರೆ ಗ್ರಂಥಾಲಯದ ಸಹಾಯಕರು.</p>.<p>ಈಚೆಗೆ ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಯೊಬ್ಬರು ಎರಡು ಚೀಲಗಳಲ್ಲಿ 40ಕ್ಕೂ ಹೆಚ್ಚು ಪುಸ್ತಕಗಳನ್ನು ಹೊತ್ತುಕೊಂಡು ಬಂದು ಗ್ರಂಥಾಲಯದಲ್ಲಿ ಇರಿಸಿ ಹೋಗಿದ್ದಾರೆ. ಅದರಲ್ಲಿ ₹ 150ಯಿಂದ ಹಿಡಿದು ₹ 750ರ ಬೆಲೆವರೆಗಿನ ಪುಸ್ತಕಗಳಿವೆ.</p>.<p>ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳಿಗೆ ನೆರವಾಗುವಂತಹ ಐಚ್ಛಿಕ ವಿಷಯಗಳಾದ ‘ಭಾರತದ ಅರ್ಥವ್ಯವಸ್ಥೆ, ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ’, ‘ಸಾಮಾನ್ಯ ಅರ್ಥಶಾಸ್ತ್ರ’, ‘ಇಂಡಿಯನ್ ಪೊಲಿಟಿ’, ‘ಭಾರತದ ಸಂವಿಧಾನ ಮತ್ತು ರಾಜಕೀಯ’, ‘ಭಾರತದ ಅರ್ಥವ್ಯವಸ್ಥೆ’, ‘ಸಾರ್ವಜನಿಕ ಆಡಳಿತ ನಿರ್ವಹಣೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು’, ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ‘ಎಫ್ಡಿಎ & ಎಸ್ಡಿಎ’, ‘ಪರೀಕ್ಷಾ ಮಾರ್ಗದರ್ಶಿ’, ‘ಕಾನ್ ಬೂಸ್ಟರ್’, ‘ಸ್ಪರ್ಧಾ ಉನ್ನತಿ’ಯಂತಹ ಸಾವಿರಾರು ಪುಸ್ತಕಗಳು ದೇಣಿಗೆಯಾಗಿ ಗ್ರಂಥಾಲಯಗಳನ್ನು ಸೇರಿವೆ.</p>.<p>ದೇಣಿಗೆಯಾಗಿ ನೀಡುವ ಪದ್ಧತಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಬೆಳೆಯುತ್ತಿದೆ. ದೇಣಿಗೆಯಾಗಿ ಬಂದಂತಹ ಪುಸ್ತಕಗಳನ್ನು ಪರಿಶೀಲಿಸಿ ತೀರ ಹಳೆಯದಾದ ಪುಸ್ತಕಗಳನ್ನು ಪ್ರತ್ಯೇಕವಾಗಿ ಇರಿಸುತ್ತೇವೆ. ಅವುಗಳನ್ನು ಕೆಲವು ವಾರಗಳ ಮಟ್ಟಿಗೆ ಓದುಗರ ಕೈಯಲ್ಲಿ ಇರಿಸಿ, ಉತ್ತಮ ಪ್ರತಿಕ್ರಿಯೆ ಬಂದಂತಹ ಪುಸ್ತಕಗಳನ್ನು ದೇಣಿಗೆ ವಿಭಾಗದಲ್ಲಿ ನೋಂದಾಯಿಸಿ, ಕಪಾಟಿನಲ್ಲಿ ಇರಿಸುತ್ತೇವೆ ಎನ್ನುತ್ತಾರೆ ಗ್ರಂಥಾಲಯದ ನೌಕರ.</p>.<div><blockquote>ನಮಗೂ ಸಿಗದಂತಹ ಉತ್ತಮವಾದ ಪುಸ್ತಕಗಳು ದೇಣಿಗೆಯ ರೂಪದಲ್ಲಿ ಗ್ರಂಥಾಲಯದ ಓದುಗರಿಗೆ ಲಭ್ಯವಾಗುತ್ತಿವೆ. ಪರೀಕ್ಷೆಯಲ್ಲಿ ಕೇಳುವ ಮಹತ್ವದ ವಿಷಯಗಳನ್ನು ಮಾರ್ಕ್ ಮಾಡಿದ್ದು ಆಕಾಂಕ್ಷಿಗಳಿಗೆ ನೆರವಾಗುತ್ತಿದೆ</blockquote><span class="attribution"> ಜಯಪ್ರಕಾಶ ಮುಖ್ಯ ಗ್ರಂಥಪಾಲಕ</span></div>.<h2>150ಕ್ಕೂ ಹೆಚ್ಚು ಪುಸ್ತಕಗಳು ದಾನ </h2>.<p>‘ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಹೋಗಿದ್ದೆ. ಉತ್ತಮ ಪುಸ್ತಕಗಳಿಗಾಗಿ ಪರದಾಡುತ್ತಿದ್ದವರ ಕಷ್ಟವನ್ನು ಕಣ್ಣಾರೆ ಕಂಡಿದ್ದೆ. ಪ್ರತಿಭೆ ಇದ್ದೂ ಖರೀದಿಸಲು ಆಗದವರ ತೊಳಲಾಟವೂ ನೀಡಿದ್ದೆ. ಬಡ ಪ್ರತಿಭಾನ್ವಿತರ ಅನುಕೂಲಕ್ಕಾಗಿ ನನ್ನ ಬಳಿ ಇದ್ದ 150ಕ್ಕೂ ಹೆಚ್ಚು ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದ್ದೇನೆ’ ಎಂದು ಜೆಸ್ಕಾಂ ಯಾದಗಿರಿ ಉಪವಿಭಾಗದ ಕಚೇರಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಂಬಿಕಾ ಶ್ರೀಮಂತ ಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗುವ ಅತ್ಯುತ್ತಮವಾದ ಪುಸ್ತಕಗಳನ್ನು ಕೆಲವು ಬರಹಗಾರರು ಪುಸ್ತಕಗಳ ಮಳಿಗೆಗಳಿಗೆ ನೀಡುವುದಿಲ್ಲ. ನೇರವಾಗಿ ಆಕಾಂಕ್ಷಿಗಳಿಗೆ ಮಾರುತ್ತಾರೆ. ಅಂತಹ ಪುಸ್ತಕಗಳು ನಮ್ಮ ಭಾಗದ ಆಕಾಂಕ್ಷಿಗಳಿಗೆ ಸಹಾಯಕ್ಕೆ ಬರಲೆಂದು ಇಚ್ಛಿಸಿ ಕೊಟ್ಟಿದ್ದೇನೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>