‘ಜಿಲ್ಲೆಯಲ್ಲಿ ಶೇ 3ರಷ್ಟು ಮಾತ್ರ ಅರಣ್ಯ ಇದೆ. ಅರಣ್ಯ ಅಭಿವೃದ್ಧಿಗೆ ಜಿಲ್ಲಾಡಳಿತದ ಜತೆಗೆ ಖಾಸಗಿ ಸಂಘ–ಸಂಸ್ಥೆಗಳು ಕೂಡ ಶ್ರಮಿಸುತ್ತಿವೆ. ಜಿಲ್ಲಾಡಳಿತ ಹೊರ
ತುಪಡಿಸಿದರೆ ಯಾವ ಸರ್ಕಾರಿ ಕಚೇರಿಗಳ ಆವರಣದಲ್ಲಿ ಮರಗಿಡಗಳನ್ನು ಅಧಿಕಾರಿಗಳು ನೆಟ್ಟಿಲ್ಲ. ಜಿಲ್ಲಾ ಆಸ್ಪತ್ರೆಯ ಅಂಗಳದಲ್ಲಿ ನೇರಳೆ ಬೃಹದಾಕಾರವಾಗಿ ಬೆಳೆದಿತ್ತು. ಅಂತಹ ಮರವನ್ನು ಬೆಳೆಸಲು ಹತ್ತಾರು ವರ್ಷ ಬೇಕಾಗುತ್ತದೆ ಎಂಬ ಅರಿವು ಅಧಿಕಾರಿಗಳಿಗಿಲ್ಲ’ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದರು.