ವಿದ್ಯುತ್ ಪೂರೈಕೆಯಲ್ಲಿ ನಗರ ಹಾಗೂ ಗ್ರಾಮೀಣ ಎಂಬ ಅಸಮಾನತೆ ತೊಲಗಬೇಕು. ಅಡಿಕೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಅವಿವೇಕದ ನಿರ್ಧಾರ. ಜನರ ಒತ್ತಡದ ನೆಪದಲ್ಲಿ ಜನರಿಗೆ ಹೊರೆ ಆಗುವುದು ಸರಿಯಲ್ಲ ಎಂದರು.
ಸಮಾವೇಶದಲ್ಲಿ ತಹಶೀಲ್ದಾರ್ ಒಳಗೊಂಡಂತೆ, ವಿವಿಧ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ರೈತರಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಸ್ಪಷ್ಟನೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ, ಪದಾಧಿಕಾರಿಗಳಾದ ಬಸವರಾಜಪ್ಪ, ಸಿದ್ದವೀರಪ್ಪ, ಷಣ್ಮುಖಪ್ಪ, ಬಿ. ವೀರಭದ್ರಪ್ಪ ಗೌಡ, ಉಮೇಶ್ ಪಾಟೀಲ್, ಈಶ್ವರಪ್ಪ, ಡಿ. ಶಿವಪ್ಪ ಸೇರಿದಂತೆ ವಿವಿಧ ಶಾಖೆಗಳ ಮುಖಂಡರು ಹಾಜರಿದ್ದರು.