‘ಕಠಿಣ ಶ್ರಮದಿಂದ ಸತತ ಅಧ್ಯಯನ ನಡೆಸಿದರೆ ಸುಲಭವಾಗಿ ಗುರಿ ತಲುಪಬಹುದು. ಪ್ರತಿದಿನ 12 ತಾಸು ತಯಾರಿ ನಡೆಸುತ್ತಿದ್ದೆ. ತಂದೆ, ತಾಯಿ ಪಡುತ್ತಿದ್ದ ಕಷ್ಟ, ಕಾರ್ಪಣ್ಯ ಸದಾ ಕಣ್ಣ ಮುಂದೆ ಬರುತ್ತಿದ್ದವು. ಏನಾದರೂ ಸಾಧನೆ ಮಾಡಿ ಹೆತ್ತವರಿಗೆ ಮತ್ತು ಹುಟ್ಟಿದ ಊರಿಗೆ ಒಳ್ಳೆಯ ಹೆಸರು ತರಬೇಕು ಎಂದು ಪಣ ತೊಟ್ಟಿದ್ದೆ. ನನ್ನ ಶ್ರಮ ಇಂದು ಫಲ ನೀಡಿದೆ’ ಎಂದು ಶಶಿಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.