<p>ಪಿಚ್ವಾಯಿ ಕಲಾಪ್ರಕಾರವು ರಾಜಸ್ಥಾನದ ನಾಥದ್ವಾರದಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಕಲೆಯಾಗಿದೆ. ಇದು ಧಾರ್ಮಿಕ ಪರಂಪರೆಯ ಸಾಂಪ್ರದಾಯಿಕ ಚಿತ್ರಕಲೆ.</p><p>‘ಪಿಚ್ವಾಯಿ’ ಎಂಬ ಪದವು ಸಂಸ್ಕೃತ ಪದಗಳಾದ ‘ಪಿಚ್’ (ಹಿಂಭಾಗ) ಮತ್ತು ‘ವೈಸ್’(ನೇತಾಡುವಿಕೆ) ಗಳಿಂದ ಮೂಡಿದ್ದು, ಇದು ನಾಥದ್ವಾರ ದೇವಸ್ಥಾನಗಳಲ್ಲಿ ಕೃಷ್ಣನ ಶ್ರೀನಾಥಜಿ ರೂಪವನ್ನು ಅಲಂಕರಿಸುವ ಹಿನ್ನೆಲೆಯಲ್ಲಿ ಬಳಸುವ ಕಲೆಯಾಗಿದೆ. </p><p>ಸುದೀರ್ಘ ಇತಿಹಾಸವಿರುವ ಈ ಚಿತ್ರಕಲೆಯು 17ನೇ ಶತಮಾನದ್ದು. ಪುಷ್ಟಿ ಮಾರ್ಗ ಅಥವಾ ವಲ್ಲಭ ಸಂಪ್ರದಾಯ ಪಂಥದ ಭಕ್ತಿ ಆಚರಣೆಗಳ ಭಾಗವಾಗಿದೆ. </p><p><strong>ಈ ಕಲೆಯ ಲಕ್ಷಣಗಳು</strong></p><p><strong>ಗಾಢ ಬಣ್ಣಗಳು</strong>: ಪಿಚ್ವಾಯಿ ಕಲಾಕೃತಿಗಳು ಗಾಢಬಣ್ಣಕ್ಕೆ ಹೆಸರುವಾಸಿಯಾಗಿವೆ. ಸಾಮಾನ್ಯವಾಗಿ ನೈಸರ್ಗಿಕವಾದ ಗಾಢ ನೀಲಿ, ಕೆಂಪು, ಕೇಸರಿ ಮತ್ತು ಹೊನ್ನಿನ ಬಣ್ಣಗಳನ್ನು ಬಳಸಲಾಗುತ್ತದೆ. </p><p><strong>ಧಾರ್ಮಿಕ ಅನುಭೂತಿ</strong> : ಪಿಚ್ವಾಯಿ ಕಲೆಗಳಲ್ಲಿ ಪ್ರಧಾನವಾಗಿ ಶ್ರೀಕೃಷ್ಣನ ಜೀವನದ ಕಥೆಗಳನ್ನು ರೂಪಿಸಲಾಗುತ್ತದೆ. ವಿವಿಧ ರಾಸ್ ಲೀಲಾಗಳು (ದೈವಿಕ ನೃತ್ಯಗಳು) ಮತ್ತು ಬಾಲ್ಯ ಮತ್ತು ಯೌವನದ ಪ್ರಸಂಗಗಳನ್ನು ಬಣ್ಣಗಳಲ್ಲಿ ನಿರೂಪಿಸಲಾಗುತ್ತದೆ. ಹಲವು ದೇಗುಲಗಳಲ್ಲಿ ಶ್ರೀಕೃಷ್ಣ ಪರಮಾತ್ಮನ ಬದುಕನ್ನು ವಿವರಿಸುವ ಚಿತ್ರವಾಗಿಯೂ ಬಳಕೆಯಾಗುತ್ತದೆ. </p><p><strong>ಸಂಕೀರ್ಣ ವಿವರಗಳು</strong> : ಪಿಚ್ವಾಯಿ ಚಿತ್ರಗಳಲ್ಲಿ ಸಂಕೀರ್ಣ ವಿವರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ವೇಷಭೂಷಣ, ಆಭರಣಗಳು ಮತ್ತು ದೇವತಾಪುರುಷ ಹಾಗೂ ಸ್ತ್ರೀಯರ ಭಾವಾಭಿವ್ಯಕ್ತಿಯನ್ನು ಸೂಕ್ಷ್ಮವಾಗಿ ಹಿಡಿದಿಡಲಾಗುತ್ತದೆ. ಇದನ್ನು ರಚಿಸುವ ಕಲಾವಿದರು ಆಧ್ಯಾತ್ಮಿಕ ಭಾವಕ್ಕೆ ಹೆಚ್ಚು ಒತ್ತು ನೀಡುತ್ತಾರೆ. </p><p> <strong>ಬಟ್ಟೆಯ ಬಳಕೆ :</strong> ಪಿಚ್ವಾಯಿ ಕಲೆಯನ್ನು ವಿಶಿಷ್ಟವಾಗಿ ಬಟ್ಟೆಯ ಮೇಲೆ ಅದರಲ್ಲಿಯೂ ಹತ್ತಿ ಅಥವಾ ರೇಷ್ಮೆ ಬಟ್ಟೆಗಳ ಮೇಲೆ ಬಿಡಿಸಲಾಗುತ್ತದೆ. ಇಲ್ಲಿ ಬಟ್ಟೆಯೇ ಕ್ಯಾನ್ವಾಸ್. ಈ ಕಲೆಯಲ್ಲಿ ಬಳಸುವ ಬಟ್ಟೆಗಳು ಸಾಕಷ್ಟು ದೊಡ್ಡದಾಗಿದ್ದು ಇವುಗಳನ್ನು ಮುಖ್ಯ ದೇವತೆಯ ಹಿಂದೆ ದೇವಾಲಯದ ಗೋಡೆಗಳ ಮೇಲೆ ನೇತುಹಾಕುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.</p><p> <strong>ಭಕ್ತಿ ಕಲೆ</strong>: ಪಿಚ್ವಾಯಿ ಚಿತ್ರಗಳು ಕೇವಲ ಒಂದು ಕಲಾಪ್ರಕಾರವಾಗಿರದೇ ಅವು ಪುಷ್ಟಿ ಮಾರ್ಗ ಪಂಥದ ಭಕ್ತಿ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ. ಹಬ್ಬಗಳು, ಆಚರಣೆಗಳು ಮತ್ತು ನಿರ್ದಿಷ್ಟ ಋತುಗಳನ್ನು ಆಚರಿಸಲು ಅವುಗಳನ್ನು ಬಳಸಲಾಗುತ್ತದೆ. </p> . <p><strong>ಸಂಕೇತ ಸಾರ:</strong> ಪಿಚ್ವಾಯಿ ಕಲೆಯು ಮುಖ್ಯವಾಗಿ ಹಲವು ಸಂಕೇತಗಳ ಸಾರವಾಗಿದೆ. ಬಣ್ಣಗಳಲ್ಲಿ ಸಂಕೇತವನ್ನು ಬಳಸಿ ನಿರ್ದಿಷ್ಟ ಕಥೆಯನ್ನು ನಿರೂಪಿಸುವ ಕುಸುರಿಯಾಗಿದೆ. ಕೃಷ್ಣ ಪರಮಾತ್ಮನ ಬಾಲ್ಯದ ಲೀಲಾವಳಿಗಳಿಂದ ಹಿಡಿದು ಕೃಷ್ಣ ರಾಧೆಯ ದೈವಿಕ ಪ್ರೇಮದ ಹಲವು ಪ್ರಸಂಗಗಳನ್ನು ಈ ಕಲೆಯಲ್ಲಿ ನಿರೂಪಿಸಲಾಗಿದೆ. </p><p> ಕಲಾತ್ಮಕ ಅಭಿವ್ಯಕ್ತಿಯಾಗಿರದೆ ಆರಾಧನೆಯ ಪ್ರಬಲ ಮಾಧ್ಯಮವಾಗಿಯೂ ಪಿಚ್ವಾಯಿ ಕಲೆ ಬೆಳೆದು ನಿಂತಿದೆ. ನಾಥದ್ವಾರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿಗೂ ಪ್ರತಿಭಾವಂತ ಕಲಾವಿದರು ಈ ಶ್ರೀಮಂತ ಕಲಾಪರಂಪರೆಯನ್ನು ಸಂರಕ್ಷಿಸಿ, ಮುನ್ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿಚ್ವಾಯಿ ಕಲಾಪ್ರಕಾರವು ರಾಜಸ್ಥಾನದ ನಾಥದ್ವಾರದಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಕಲೆಯಾಗಿದೆ. ಇದು ಧಾರ್ಮಿಕ ಪರಂಪರೆಯ ಸಾಂಪ್ರದಾಯಿಕ ಚಿತ್ರಕಲೆ.</p><p>‘ಪಿಚ್ವಾಯಿ’ ಎಂಬ ಪದವು ಸಂಸ್ಕೃತ ಪದಗಳಾದ ‘ಪಿಚ್’ (ಹಿಂಭಾಗ) ಮತ್ತು ‘ವೈಸ್’(ನೇತಾಡುವಿಕೆ) ಗಳಿಂದ ಮೂಡಿದ್ದು, ಇದು ನಾಥದ್ವಾರ ದೇವಸ್ಥಾನಗಳಲ್ಲಿ ಕೃಷ್ಣನ ಶ್ರೀನಾಥಜಿ ರೂಪವನ್ನು ಅಲಂಕರಿಸುವ ಹಿನ್ನೆಲೆಯಲ್ಲಿ ಬಳಸುವ ಕಲೆಯಾಗಿದೆ. </p><p>ಸುದೀರ್ಘ ಇತಿಹಾಸವಿರುವ ಈ ಚಿತ್ರಕಲೆಯು 17ನೇ ಶತಮಾನದ್ದು. ಪುಷ್ಟಿ ಮಾರ್ಗ ಅಥವಾ ವಲ್ಲಭ ಸಂಪ್ರದಾಯ ಪಂಥದ ಭಕ್ತಿ ಆಚರಣೆಗಳ ಭಾಗವಾಗಿದೆ. </p><p><strong>ಈ ಕಲೆಯ ಲಕ್ಷಣಗಳು</strong></p><p><strong>ಗಾಢ ಬಣ್ಣಗಳು</strong>: ಪಿಚ್ವಾಯಿ ಕಲಾಕೃತಿಗಳು ಗಾಢಬಣ್ಣಕ್ಕೆ ಹೆಸರುವಾಸಿಯಾಗಿವೆ. ಸಾಮಾನ್ಯವಾಗಿ ನೈಸರ್ಗಿಕವಾದ ಗಾಢ ನೀಲಿ, ಕೆಂಪು, ಕೇಸರಿ ಮತ್ತು ಹೊನ್ನಿನ ಬಣ್ಣಗಳನ್ನು ಬಳಸಲಾಗುತ್ತದೆ. </p><p><strong>ಧಾರ್ಮಿಕ ಅನುಭೂತಿ</strong> : ಪಿಚ್ವಾಯಿ ಕಲೆಗಳಲ್ಲಿ ಪ್ರಧಾನವಾಗಿ ಶ್ರೀಕೃಷ್ಣನ ಜೀವನದ ಕಥೆಗಳನ್ನು ರೂಪಿಸಲಾಗುತ್ತದೆ. ವಿವಿಧ ರಾಸ್ ಲೀಲಾಗಳು (ದೈವಿಕ ನೃತ್ಯಗಳು) ಮತ್ತು ಬಾಲ್ಯ ಮತ್ತು ಯೌವನದ ಪ್ರಸಂಗಗಳನ್ನು ಬಣ್ಣಗಳಲ್ಲಿ ನಿರೂಪಿಸಲಾಗುತ್ತದೆ. ಹಲವು ದೇಗುಲಗಳಲ್ಲಿ ಶ್ರೀಕೃಷ್ಣ ಪರಮಾತ್ಮನ ಬದುಕನ್ನು ವಿವರಿಸುವ ಚಿತ್ರವಾಗಿಯೂ ಬಳಕೆಯಾಗುತ್ತದೆ. </p><p><strong>ಸಂಕೀರ್ಣ ವಿವರಗಳು</strong> : ಪಿಚ್ವಾಯಿ ಚಿತ್ರಗಳಲ್ಲಿ ಸಂಕೀರ್ಣ ವಿವರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ವೇಷಭೂಷಣ, ಆಭರಣಗಳು ಮತ್ತು ದೇವತಾಪುರುಷ ಹಾಗೂ ಸ್ತ್ರೀಯರ ಭಾವಾಭಿವ್ಯಕ್ತಿಯನ್ನು ಸೂಕ್ಷ್ಮವಾಗಿ ಹಿಡಿದಿಡಲಾಗುತ್ತದೆ. ಇದನ್ನು ರಚಿಸುವ ಕಲಾವಿದರು ಆಧ್ಯಾತ್ಮಿಕ ಭಾವಕ್ಕೆ ಹೆಚ್ಚು ಒತ್ತು ನೀಡುತ್ತಾರೆ. </p><p> <strong>ಬಟ್ಟೆಯ ಬಳಕೆ :</strong> ಪಿಚ್ವಾಯಿ ಕಲೆಯನ್ನು ವಿಶಿಷ್ಟವಾಗಿ ಬಟ್ಟೆಯ ಮೇಲೆ ಅದರಲ್ಲಿಯೂ ಹತ್ತಿ ಅಥವಾ ರೇಷ್ಮೆ ಬಟ್ಟೆಗಳ ಮೇಲೆ ಬಿಡಿಸಲಾಗುತ್ತದೆ. ಇಲ್ಲಿ ಬಟ್ಟೆಯೇ ಕ್ಯಾನ್ವಾಸ್. ಈ ಕಲೆಯಲ್ಲಿ ಬಳಸುವ ಬಟ್ಟೆಗಳು ಸಾಕಷ್ಟು ದೊಡ್ಡದಾಗಿದ್ದು ಇವುಗಳನ್ನು ಮುಖ್ಯ ದೇವತೆಯ ಹಿಂದೆ ದೇವಾಲಯದ ಗೋಡೆಗಳ ಮೇಲೆ ನೇತುಹಾಕುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.</p><p> <strong>ಭಕ್ತಿ ಕಲೆ</strong>: ಪಿಚ್ವಾಯಿ ಚಿತ್ರಗಳು ಕೇವಲ ಒಂದು ಕಲಾಪ್ರಕಾರವಾಗಿರದೇ ಅವು ಪುಷ್ಟಿ ಮಾರ್ಗ ಪಂಥದ ಭಕ್ತಿ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ. ಹಬ್ಬಗಳು, ಆಚರಣೆಗಳು ಮತ್ತು ನಿರ್ದಿಷ್ಟ ಋತುಗಳನ್ನು ಆಚರಿಸಲು ಅವುಗಳನ್ನು ಬಳಸಲಾಗುತ್ತದೆ. </p> . <p><strong>ಸಂಕೇತ ಸಾರ:</strong> ಪಿಚ್ವಾಯಿ ಕಲೆಯು ಮುಖ್ಯವಾಗಿ ಹಲವು ಸಂಕೇತಗಳ ಸಾರವಾಗಿದೆ. ಬಣ್ಣಗಳಲ್ಲಿ ಸಂಕೇತವನ್ನು ಬಳಸಿ ನಿರ್ದಿಷ್ಟ ಕಥೆಯನ್ನು ನಿರೂಪಿಸುವ ಕುಸುರಿಯಾಗಿದೆ. ಕೃಷ್ಣ ಪರಮಾತ್ಮನ ಬಾಲ್ಯದ ಲೀಲಾವಳಿಗಳಿಂದ ಹಿಡಿದು ಕೃಷ್ಣ ರಾಧೆಯ ದೈವಿಕ ಪ್ರೇಮದ ಹಲವು ಪ್ರಸಂಗಗಳನ್ನು ಈ ಕಲೆಯಲ್ಲಿ ನಿರೂಪಿಸಲಾಗಿದೆ. </p><p> ಕಲಾತ್ಮಕ ಅಭಿವ್ಯಕ್ತಿಯಾಗಿರದೆ ಆರಾಧನೆಯ ಪ್ರಬಲ ಮಾಧ್ಯಮವಾಗಿಯೂ ಪಿಚ್ವಾಯಿ ಕಲೆ ಬೆಳೆದು ನಿಂತಿದೆ. ನಾಥದ್ವಾರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿಗೂ ಪ್ರತಿಭಾವಂತ ಕಲಾವಿದರು ಈ ಶ್ರೀಮಂತ ಕಲಾಪರಂಪರೆಯನ್ನು ಸಂರಕ್ಷಿಸಿ, ಮುನ್ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>