ಬೆಂಗಳೂರು: ಸಿವಿಲ್ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗಾಗಿಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ನ್ಯಾಯಾಧೀಶರ ನೇಮಕಾತಿ ಅಧಿಸೂಚನೆಯನ್ನು ಫೆಬ್ರುವರಿ 25ರಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಒಟ್ಟು 53 ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲಾಗುವುದು.
ಹುದ್ದೆಗಳ ಸಂಖ್ಯೆ: 53
ಮೀಸಲಾತಿ: ಸಾಮಾನ್ಯ ವರ್ಗ–21, ಪ.ಜಾತಿ–06, ಪ.ಪಂಗಡ–01, ಹಿಂದುಳಿದ ವರ್ಗ (ಒಬಿಸಿ ಮತ್ತು ಪ್ರವರ್ಗ 1 ಸೇರಿ)–25
ವಿದ್ಯಾರ್ಹತೆ:ಮಾನ್ಯತೆ ಪಡೆದವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು. ಹಾಗೂ ಕಡ್ಡಾಯವಾಗಿ ವಕೀಲರಾಗಿ ನೋಂದಣಿಯಾಗಿರಬೇಕು.
ವಯಸ್ಸು:ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಅನ್ವಯ ಮೀಸಲಾತಿ ಸಡಿಲಿಕೆ ಇರಲಿದೆ.
ವೇತನ ಶ್ರೇಣಿ:₹ 27,700/-(ಮೂಲ ವೇತನ)ರಿಂದ ₹44,770 ( ಇತರೆ ಭತ್ಯೆಗಳು ಸೇರಿರುತ್ತವೆ)
ನೇಮಕಾತಿ ವಿಧಾನ:ಎರಡು ಹಂತಗಳ ಪರೀಕ್ಷೆಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಮೊದಲನೇ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಇರುತ್ತದೆ.
ಪರೀಕ್ಷಾ ಶುಲ್ಕ
ಪೂರ್ವಭಾವಿ ಪರೀಕ್ಷೆ:ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 500, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 250 ಮಾತ್ರ
ಮುಖ್ಯ ಪರೀಕ್ಷೆ:ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 1000, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 500 ಮಾತ್ರ
ಅರ್ಜಿ ಸಲ್ಲಿಸುವ ವಿಧಾನ:ಆಸಕ್ತ ಅಭ್ಯರ್ಥಿಗಳನ್ನು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಕೆ ಕಡೆ ದಿನಾಂಕ:ಮಾರ್ಚ್ 26, 2020 (ರಾತ್ರಿ 11:59 ವರೆಗೆ)
ಅಧಿಸೂಚನೆ, ಸಾಮಾನ್ಯ ಸೂಚನೆಗಳು ಮತ್ತು ಪರೀಕ್ಷೆ ಮಾಹಿತಿಗಾಗಿ ಈ ಕೆಳಗಿ ನೀಡಿರುವ ಲಿಂಕ್ ಅನ್ನುಕ್ಲಿಕ್ ಮಾಡಿ
ನ್ಯಾಯಾಧೀಶರ ನೇಮಕಾತಿಯಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹೈಕೋರ್ಟ್ನ ಅಧಿಕೃತ ವೆಬ್ಸೈಟ್karnatakajudiciary.kar.nic.inನಿಂದ ಮಾಹಿತಿಯನ್ನು ಪಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.