ಜಗಳೂರು: ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ರೋಗಿಯಿಂದ ₹ 16 ಸಾವಿರ ವಸೂಲಿ ಮಾಡಿದ ವೈದ್ಯ, ಗಬ್ಬೆದ್ದು ನಾರುತ್ತಿರುವ ವಾರ್ಡ್ಗಳು, ತಡವಾಗಿ ಆಸ್ಪತ್ರೆಗೆ ಬರುವ ವೈದ್ಯರು, ಅವ್ಯವಹಾರದ ಆರೋಪ. ಶಾಸಕ ಎಸ್.ವಿ. ರಾಮಚಂದ್ರ ಅವರು ಇಲ್ಲಿನ ತಾಲ್ಲೂಕು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆಗಳು ತೆರೆದುಕೊಂಡಿದ್ದು ಹೀಗೆ.