<p><strong>ಇಂದೋರ್</strong>: 'ನೋಟಾ' (ಮೇಲಿನ ಯಾರೂ ಅಲ್ಲ – NOTA) ಮತ ಚಲಾಯಿಸುವಂತೆ ಕಾಂಗ್ರೆಸ್ ಪಕ್ಷವು ಪೋಸ್ಟರ್ಗಳ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಹರಿಹಾಯ್ದಿದೆ. ಮತದಾರರನ್ನು ಈ ರೀತಿ ಒತ್ತಾಯಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಸರಿ ಎಂದು ಕಿಡಿಕಾರಿದೆ.</p><p>ಬಿಜೆಪಿಯವರಾದ ಇಂದೋರ್ನ ಕೌನ್ಸಿಲರ್ ಸಂಧ್ಯಾ ಯಾದವ್ ಅವರು, ಆಟೋರಿಕ್ಷಾ ಮೇಲೆ ಅಂಟಿಸಿದ್ದ ಪೋಸ್ಟರ್ವೊಂದನ್ನು ತೆರವುಗೊಳಿಸಿದ್ದಾರೆ. ಇದನ್ನು ಖಂಡಿಸಿರುವ ಕಾಂಗ್ರೆಸ್, ಸಂಧ್ಯಾ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.</p><p>ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ, 'ಮತಯಂತ್ರದಲ್ಲಿ ನೋಟಾ ಆಯ್ಕೆಯನ್ನು ಒತ್ತುವಂತೆ ಮತದಾರರನ್ನು ಒತ್ತಾಯಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪರಾಧ' ಎಂದಿದ್ದಾರೆ.</p><p>'ಹೀಗೆ ಪ್ರಚೋದಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಸರಿ' ಎಂದಿರುವ ಅವರು, 'ಕಾಂಗ್ರೆಸ್ ನಾಯಕತ್ವವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಯಸುತ್ತಿದೆ' ಎಂದು ಆರೋಪಿಸಿದ್ದಾರೆ.</p><p>ಇಂದೋರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಕ್ಷಯ್ ಕಾಂತಿ ಬಾಮ್ ಅವರು ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಏಪ್ರಿಲ್ 29ರಂದು ತಮ್ಮ ನಾಮಪತ್ರ ಹಿಂಪಡೆದಿದ್ದರು. ಬಳಿಕ ಬಿಜೆಪಿ ಸೇರಿದ್ದರು. ಇದರಿಂದ ಆಕ್ರೋಶಗೊಂಡಿರುವ 'ಕೈ' ಪಡೆ, ನೋಟಾ ಚಲಾಯಿಸುವಂತೆ ಕರೆ ನೀಡುತ್ತಿದೆ.</p>.ಇಂದೋರ್ | ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ; ಬಿಜೆಪಿ ನಾಯಕಿಯ ಬೇಸರ.<p>ಅಕ್ಷಯ್ ನಾಮಪತ್ರ ಹಿಂಪಡೆದ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಮಾತನಾಡಿರುವ ಶರ್ಮಾ, 'ನಿಮ್ಮ ಅಭ್ಯರ್ಥಿ ತಾವಾಗಿಯೇ ನಾಮಪತ್ರ ಹಿಂಪಡೆದಿದ್ದಾರೆ. ಜನರೇನು ಮೂರ್ಖರಲ್ಲ. ಜನರು ನೋಟಾ ಚಲಾಯಿಸಬೇಕೆಂದು ನೀವು ಮಾಡುತ್ತಿರುವುದು ಸರಿಯಲ್ಲ' ಎಂದು ಹೇಳಿದ್ದಾರೆ.</p><p>ಮುಂದುವರಿದು, 'ನಾವಿಲ್ಲಿ ಎಕ್ಸ್-ರೇ ಮತ್ತು ಶುದ್ಧೀಕರಣ ಯಂತ್ರಗಳನ್ನು ಸ್ಥಾಪಿಸಿದ್ದೇವೆ. ಚಿಂತಿಸುವ ಅಗತ್ಯವಿಲ್ಲ' ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.</p><p><strong>ಕಾಂಗ್ರೆಸ್ ದೂರು<br></strong>'ಲೋಕತಂತ್ರ ಬಚಾವೊ ಸಮಿತಿ'ಯು ಜನರು ನೋಟಾ ಚಲಾಯಿಸಬೇಕೆಂದು ಮನವಿ ಮಾಡಿ ಅಂಟಿಸಿರುವ ಪೋಸ್ಟರ್ ಅನ್ನು ಸಂಧ್ಯಾ ಯಾದವ್ ಅವರು ತೆರವು ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕಾಂಗ್ರೆಸ್, ಚುನಾವಣಾ ಆಯೋಗದ ಮೆಟ್ಟಿಲೇರಿದೆ.</p><p>ಆದರೆ, ತಾವು ಈ ಕೆಲಸ ಮುಂದುವರಿಸುವುದಾಗಿ ಹೇಳಿರುವ ಸಂಧ್ಯಾ, 'ಆತ್ಮಸಾಕ್ಷಿಯುಳ್ಳ ಪ್ರಜೆಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ' ಎಂದು ಪ್ರತಿಪಾದಿಸಿದ್ದಾರೆ.</p>.ಸಂಪಾದಕೀಯ: ಚುನಾವಣೆಗಳಲ್ಲಿ ‘ನೋಟಾ’ ಆಯ್ಕೆ ಇನ್ನಷ್ಟು ಪರಿಣಾಮಕಾರಿ ಆಗಿಸಬೇಕು.ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ.<p>ಈ ಆಯ್ಕೆ (ನೋಟಾ) ಚಲಾಯಿಸುವಂತೆ ಪ್ರಚಾರ ಮಾಡುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದೂ ಹೇಳಿದ್ದಾರೆ.</p><p>ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಯಾದವ್, ಬಿಜೆಪಿ ಕೌನ್ಸಿಲರ್ ಸಂಧ್ಯಾ ಅವರು ಗೂಂಡಾಗಳೊಂದಿಗೆ ಹೋಗಿ ಆಟೋ ಚಾಲಕನನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.</p><p>ವಿಡಿಯೊ ದಾಖಲೆಯನ್ನು ನೀಡಿ, ಸಂಧ್ಯಾ ವಿರುದ್ಧ ದೂರು ನೀಡಿರುವುದಾಗಿಯೂ ತಿಳಿಸಿದ್ದಾರೆ.</p><p>ಇಂದೋರ್ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ಮತದಾನ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದೋರ್</strong>: 'ನೋಟಾ' (ಮೇಲಿನ ಯಾರೂ ಅಲ್ಲ – NOTA) ಮತ ಚಲಾಯಿಸುವಂತೆ ಕಾಂಗ್ರೆಸ್ ಪಕ್ಷವು ಪೋಸ್ಟರ್ಗಳ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಹರಿಹಾಯ್ದಿದೆ. ಮತದಾರರನ್ನು ಈ ರೀತಿ ಒತ್ತಾಯಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಸರಿ ಎಂದು ಕಿಡಿಕಾರಿದೆ.</p><p>ಬಿಜೆಪಿಯವರಾದ ಇಂದೋರ್ನ ಕೌನ್ಸಿಲರ್ ಸಂಧ್ಯಾ ಯಾದವ್ ಅವರು, ಆಟೋರಿಕ್ಷಾ ಮೇಲೆ ಅಂಟಿಸಿದ್ದ ಪೋಸ್ಟರ್ವೊಂದನ್ನು ತೆರವುಗೊಳಿಸಿದ್ದಾರೆ. ಇದನ್ನು ಖಂಡಿಸಿರುವ ಕಾಂಗ್ರೆಸ್, ಸಂಧ್ಯಾ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.</p><p>ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ, 'ಮತಯಂತ್ರದಲ್ಲಿ ನೋಟಾ ಆಯ್ಕೆಯನ್ನು ಒತ್ತುವಂತೆ ಮತದಾರರನ್ನು ಒತ್ತಾಯಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪರಾಧ' ಎಂದಿದ್ದಾರೆ.</p><p>'ಹೀಗೆ ಪ್ರಚೋದಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಸರಿ' ಎಂದಿರುವ ಅವರು, 'ಕಾಂಗ್ರೆಸ್ ನಾಯಕತ್ವವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಯಸುತ್ತಿದೆ' ಎಂದು ಆರೋಪಿಸಿದ್ದಾರೆ.</p><p>ಇಂದೋರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಕ್ಷಯ್ ಕಾಂತಿ ಬಾಮ್ ಅವರು ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಏಪ್ರಿಲ್ 29ರಂದು ತಮ್ಮ ನಾಮಪತ್ರ ಹಿಂಪಡೆದಿದ್ದರು. ಬಳಿಕ ಬಿಜೆಪಿ ಸೇರಿದ್ದರು. ಇದರಿಂದ ಆಕ್ರೋಶಗೊಂಡಿರುವ 'ಕೈ' ಪಡೆ, ನೋಟಾ ಚಲಾಯಿಸುವಂತೆ ಕರೆ ನೀಡುತ್ತಿದೆ.</p>.ಇಂದೋರ್ | ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ; ಬಿಜೆಪಿ ನಾಯಕಿಯ ಬೇಸರ.<p>ಅಕ್ಷಯ್ ನಾಮಪತ್ರ ಹಿಂಪಡೆದ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಮಾತನಾಡಿರುವ ಶರ್ಮಾ, 'ನಿಮ್ಮ ಅಭ್ಯರ್ಥಿ ತಾವಾಗಿಯೇ ನಾಮಪತ್ರ ಹಿಂಪಡೆದಿದ್ದಾರೆ. ಜನರೇನು ಮೂರ್ಖರಲ್ಲ. ಜನರು ನೋಟಾ ಚಲಾಯಿಸಬೇಕೆಂದು ನೀವು ಮಾಡುತ್ತಿರುವುದು ಸರಿಯಲ್ಲ' ಎಂದು ಹೇಳಿದ್ದಾರೆ.</p><p>ಮುಂದುವರಿದು, 'ನಾವಿಲ್ಲಿ ಎಕ್ಸ್-ರೇ ಮತ್ತು ಶುದ್ಧೀಕರಣ ಯಂತ್ರಗಳನ್ನು ಸ್ಥಾಪಿಸಿದ್ದೇವೆ. ಚಿಂತಿಸುವ ಅಗತ್ಯವಿಲ್ಲ' ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.</p><p><strong>ಕಾಂಗ್ರೆಸ್ ದೂರು<br></strong>'ಲೋಕತಂತ್ರ ಬಚಾವೊ ಸಮಿತಿ'ಯು ಜನರು ನೋಟಾ ಚಲಾಯಿಸಬೇಕೆಂದು ಮನವಿ ಮಾಡಿ ಅಂಟಿಸಿರುವ ಪೋಸ್ಟರ್ ಅನ್ನು ಸಂಧ್ಯಾ ಯಾದವ್ ಅವರು ತೆರವು ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕಾಂಗ್ರೆಸ್, ಚುನಾವಣಾ ಆಯೋಗದ ಮೆಟ್ಟಿಲೇರಿದೆ.</p><p>ಆದರೆ, ತಾವು ಈ ಕೆಲಸ ಮುಂದುವರಿಸುವುದಾಗಿ ಹೇಳಿರುವ ಸಂಧ್ಯಾ, 'ಆತ್ಮಸಾಕ್ಷಿಯುಳ್ಳ ಪ್ರಜೆಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ' ಎಂದು ಪ್ರತಿಪಾದಿಸಿದ್ದಾರೆ.</p>.ಸಂಪಾದಕೀಯ: ಚುನಾವಣೆಗಳಲ್ಲಿ ‘ನೋಟಾ’ ಆಯ್ಕೆ ಇನ್ನಷ್ಟು ಪರಿಣಾಮಕಾರಿ ಆಗಿಸಬೇಕು.ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ.<p>ಈ ಆಯ್ಕೆ (ನೋಟಾ) ಚಲಾಯಿಸುವಂತೆ ಪ್ರಚಾರ ಮಾಡುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದೂ ಹೇಳಿದ್ದಾರೆ.</p><p>ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಯಾದವ್, ಬಿಜೆಪಿ ಕೌನ್ಸಿಲರ್ ಸಂಧ್ಯಾ ಅವರು ಗೂಂಡಾಗಳೊಂದಿಗೆ ಹೋಗಿ ಆಟೋ ಚಾಲಕನನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.</p><p>ವಿಡಿಯೊ ದಾಖಲೆಯನ್ನು ನೀಡಿ, ಸಂಧ್ಯಾ ವಿರುದ್ಧ ದೂರು ನೀಡಿರುವುದಾಗಿಯೂ ತಿಳಿಸಿದ್ದಾರೆ.</p><p>ಇಂದೋರ್ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ಮತದಾನ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>