ಬಿಎಸ್ಪಿ ರಾಜ್ಯ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಕಾಲದಲ್ಲಿ ಹಣ ಕೊಟ್ಟವರ ಪರವಾಗಿ ನೀತಿಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ರೂಪಿಸಿಕೊಂಡು ಬಂದಿವೆ. ಇದರಿಂದಾಗಿ ಬಡತನ, ಅನಕ್ಷರತೆ ಮತ್ತು ಹಸಿವಿನಿಂದ ಜನ ಈಗಲೂ ಕಂಗಾಲಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಆಡಳಿತ ನಡೆಸಿದ ಬಿಎಸ್ಪಿ, ಎಂದಿಗೂ ಶ್ರೀಮಂತರಿಂದ ಹಣ ಪಡೆದಿಲ್ಲ. ಬಡಜನರ ಕಾಣಿಕೆ ಮತ್ತು ಕಾರ್ಯಕರ್ತರ ಸದಸ್ಯತ್ವ ಶುಲ್ಕದಿಂದ ಬಂದ ಹಣದಿಂದ ಚುನಾವಣೆ ನಡೆಸಿದ್ದೇವೆ. ಅಧಿಕಾರಕ್ಕೆ ಬಂದಾಗ ಬಡವರ ಪರ ನೀತಿ ರೂಪಿಸಿದ್ದೇವೆ’ ಎಂದರು.