ಬೆಂಗಳೂರು: ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಈ ಸಂಭ್ರಮವನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕಾರ್ಯಕರ್ತರೊಂದಿದೆ ಆಚರಿಸಿದ್ದಾರೆ.
ಈ ವಿಡಿಯೊವನ್ನು ಎನ್ಎನ್ಐ ಟ್ವೀಟ್ ಮಾಡಿದೆ.
ಮೈಸೂರಿನ ಮಹಾರಾಣಿ ವಾಣಿಜ್ಯ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದರು. ಮತ ಎಣಿಕೆಯ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಬಳಿಕ ಕಾರ್ಯಕರ್ತರ ಮುಂದೆ ಆಗಮಿಸಿದ ಅವರು, ಹೆಬ್ಬೆರಳು ತೋರಿ ಖುಷಿ ಹಂಚಿಕೊಂಡರು.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 11 ಗಂಟೆ ವೇಳೆಗೆ ಕಾಂಗ್ರೆಸ್ 114 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಜೆಡಿಎಸ್ 30 ಸೀಟುಗಳಲ್ಲಿ ಮುಂದಿದೆ.