ವಿಜಯಪುರ: ಚುನಾವಣಾ ರಾಜಕೀಯಕ್ಕೆ ಬರುವ ಬಗ್ಗೆ ನಾನು ಸದ್ಯ ಯೋಚನೆ ಮಾಡಿಲ್ಲ ಎಂದು ಚಿತ್ರನಟಿ ರಮ್ಯಾ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಟೀಕಿಸಿರುವ ಶಾಸಕ ಬಸನಗೌಡ ಯತ್ನಾಳ ಹೇಳಿಕೆ ಕೀಳುಮಟ್ಟದ ರಾಜಕೀಯ. ಹೆಣ್ಣು ಮಕ್ಕಳ ಮೇಲೆ ನೆಗೆಟಿವ್ ಟೀಕೆ ಸರಿಯಲ್ಲ‘ ಎಂದರು.