ಡಿಕೆಶಿ ವಿರುದ್ಧ ಆರೋಪ: ‘ಕರ್ನಾಟಕದಲ್ಲಿ ನೀರಾವರಿ ಸಚಿವರೊಬ್ಬರಿದ್ದಾರೆ, ಬಹಳ ತಜ್ಞರು. ಅವರೊಬ್ಬ ಜಲಸಂಪನ್ಮೂಲ ಸಚಿವರಷ್ಟೇ ಅಲ್ಲ. ಬಿಡಿಎ, ವಾಟರ್ ಬೋರ್ಡ್, ಕಾರ್ಪೊರೇಷನ್ ಸೇರಿದಂತೆ ಎಲ್ಲ ಕಡೆಯೂ ದರ್ಬಾರು ಮಾಡಿ ದೋಚುತ್ತಿದ್ದಾರೆ. ಅವರು ಕೈಯಲ್ಲಿ ತೆಗೆದುಕೊಳ್ಳುವುದಿಲ್ಲ, ಬರೀ ಬಾಚಿಕೊಕೊಳ್ಳುವುದೇ ಆಗಿದೆ. ಬಾಚಿ ಬಾಚಿ ರಾಜಸ್ತಾನ, ಛತ್ತೀಸಗಢಕ್ಕೆ ಕಳುಹಿಸುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.