ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಡಾ.ಮಂಜುನಾಥ್ ಅವರು ಸಂಸದರಾದರೆ ಕ್ಷೇತ್ರ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಈ ಕ್ಷೇತ್ರದಲ್ಲಿ ಯಾರನ್ನೋ ಸೋಲಿಸಬೇಕು ಎನ್ನುವ ಉದ್ದೇಶ ಇಲ್ಲ. ಮಂಜುನಾಥ್ ಅವರು ಗೆಲ್ಲಿಸಿ ವೈದ್ಯಕೀಯ ಕ್ಷೇತ್ರದ ಸೇವೆ ವಿಸ್ತಾರ ಮಾಡಬೇಕು ಎನ್ನುವುದು ಜನರ ಭಾವನೆಯಾಗಿದೆ ಎಂದರು.
ತಾಲ್ಲೂಕಿನ ಮುದುಗೆರೆ, ಮತ್ತೀಕೆರೆ ಶೆಟ್ಟಿಹಳ್ಳಿ, ಬೈರಾಪಟ್ಟಣ, ಚಕ್ಕೆರೆ, ಮಳೂರುಪಟ್ಟಣ, ಕೂಡ್ಲೂರು, ಎಸ್.ಎಂ.ದೊಡ್ಡಿ, ಎಸ್.ಎಂ.ಹಳ್ಳಿ, ಹೊಂಗನೂರು, ನೀಲಸಂದ್ರ, ಮೋಳೆದೊಡ್ಡಿ, ತಗಚಗೆರೆ, ಬ್ರಹ್ಮಣೀಪುರ, ಮುನಿಯಪ್ಪನದೊಡ್ಡಿ, ನಗರದ ಹಲವೆಡೆ ಸೇರಿದಂತೆ ಹಲವು ಕಡೆ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು.