ವಿಜಯಪುರ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆ ದಿನವಾದ ಭಾನುವಾರ ಗೃಹ ಸಚಿವ ಎಂ.ಬಿ.ಪಾಟೀಲ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ, ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಪರ ಮತ ಯಾಚಿಸಿದರು.
ವಿವಿಧ ಗ್ರಾಮಗಳ ಮುಖಂಡರ ಮನೆ, ತೋಟಗಳಿಗೆ ಎಡತಾಕಿ ಪಕ್ಷದ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ, ಚುನಾವಣೆಯ ತಂತ್ರಗಾರಿಕೆ ರೂಪಿಸಿದರು.
ನಿಡೋಣಿ, ಕಂಬಾಗಿ, ಗುಣದಾಳ, ಹೊಸೂರು, ದೇವರಗೆಣ್ಣೂರ, ಜೈನಾಪುರ, ಬಬಲೇಶ್ವರದಲ್ಲಿ ಮತ ಯಾಚಿಸಿದರು. ತಮ್ಮ ಬೆಂಬಲಿಗರು, ಕಾರ್ಯಕರ್ತರಿಗೆ ಇದೇ ಸಂದರ್ಭ ಮನೆ ಮನೆಗೂ ತೆರಳಿ ಮತ ಯಾಚನೆ ನಡೆಸುವಂತೆ ಸೂಚಿಸಿದರು.