<p><strong>ಲಖನೌ:</strong> ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಬೇರಾವ ಸಮುದಾಯಕ್ಕೂ ಸಿಗದಷ್ಟು ಮಾನ್ಯತೆ ಈ ಬಾರಿಯ ಚುನಾವಣೆಯಲ್ಲಿ ನಿಷಾದ್ ಸಮುದಾಯಕ್ಕೆ (ಮೀನುಗಾರರು) ಸಿಕ್ಕಿದೆ.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಗೋರಖಪುರ ಸೇರಿದಂತೆ 10ಕ್ಕೂ ಲೋಕಸಭಾ ಮತಕ್ಷೇತ್ರಗಳಲ್ಲಿ ಈ ಸಮುದಾಯದವರು ಹರಡಿದ್ದು, ಶೇ 12ರಷ್ಟು ಮತದಾರರಿದ್ದಾರೆ.</p>.<p>ನಿಷಾದ್ ಸಮುದಾಯದ ಮತಗಳನ್ನು ಪಡೆಯುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಬಿಎಸ್ಪಿ–ಎಸ್ಪಿ–ಆರ್ಎಲ್ಡಿ ಮಹಾಮೈತ್ರಿಕೂಟವು ಆ ಸಮುದಾಯದ ಮನವೊಲಿಕೆ ಮಾಡಬಹುದು ಎಂಬ ಚಿತ್ರಣ ಆರಂಭದಲ್ಲಿ ಇತ್ತು.</p>.<p>ಇದಕ್ಕೆಲ್ಲಾ ಕಾರಣ ಪ್ರವೀಣ್ ನಿಷಾದ್. ಕಳೆದ ವರ್ಷ ನಡೆದ ಗೋರಖಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ<br />ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದವರು ಇದೇ ನಿಷಾದ್.</p>.<p>ಪ್ರವೀಣ್ ಅವರ ತಂದೆ ಸಂಜಯ್ ನಿಷಾದ್ ಅವರು ‘ನಿಷಾದ್ ಪಕ್ಷ’ದ ಮುಖ್ಯಸ್ಥರು. ಪ್ರವೀಣ್ ಈ ಬಾರಿಯೂ ಗೋರಖಪುರದಿಂದ ಮರು ಆಯ್ಕೆ ಬಯಸಿದ್ದರು. ಮಹಾಮೈತ್ರಿಕೂಟವನ್ನು ಸೇರಿರುವ ನಿಷಾದ್ ಪಕ್ಷಕ್ಕೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಒಂದು ಲೋಕಸಭಾ ಸ್ಥಾವನನ್ನೂ ನೀಡಿದ್ದರು.</p>.<p>ಈ ಬೆಳವಣಿಗೆಯನ್ನು ಮನಗಂಡ ಬಿಜೆಪಿ, ಸಂಜಯ್ ನಿಷಾದ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಯಿತು. ಮಹಾಮೈತ್ರಿಕೂಟವನ್ನು ತೊರೆದ ನಿಷಾದ್ ಪಕ್ಷ, ಗುರುವಾರ ಎನ್ಡಿಎ ತೆಕ್ಕೆಗೆ ಸೇರಿತು.</p>.<p>ಆದರೆ ಇದರಿಂದ ವಿಚಲಿತರಾಗದ ಅಖಿಲೇಶ್, ಬಿಜೆಪಿಗೆ ತಿರುಗೇಟು ನೀಡಿದ್ದಾರೆ, ನಿಷಾದ್ ಸಮುದಾಯದ ಮತ್ತೊಬ್ಬ ಪ್ರಭಾವಿ ವ್ಯಕ್ತಿ ಜಮುನಾ ನಿಷಾದ್ ಅವರ ಹೆಸರನ್ನು ಗೋರಖಪುರ ಕ್ಷೇತ್ರದ ಉಮೇದುವಾರರನ್ನಾಗಿ ಘೋಷಿಸುವ ಮೂಲಕ ಸಡ್ಡು ಹೊಡೆದಿದ್ದಾರೆ.</p>.<p>ಉತ್ತರ ಪ್ರದೇಶದ ಬಲಿಯಾ, ಭದೋಯಿ, ಗೋರಖಪುರ, ಗಾಜಿಪುರ, ಮೀರಜ್ಪುರ, ವಾರಾಣಸಿ, ಅಲಹಾಬಾದ್, ಫತೇಪುರ<br />ಕ್ಷೇತ್ರಗಳಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.</p>.<p>ಡಕಾಯಿತರ ರಾಣಿ ಎನಿಸಿಕೊಂಡಿದ್ದ ಪೂಲನ್ದೇವಿ ಅವರು ನಿಷಾದ್ ಸಮುದಾಯಕ್ಕೆ ಸೇರಿದವರು. ಸಮುದಾಯದ ಬಲದಿಂದಾಗಿ ಅವರು ಎರಡು ಬಾರಿ ಲೋಕಸಭಾ ಸದಸ್ಯರಾಗಿ ಗೆದ್ದು ಬಂದಿದ್ದರು.</p>.<p>ಮಹಾಮೈತ್ರಿಕೂಟದ ನಿಷಾದ್ ಮತ್ತು ಬಿಜೆಪಿಯ ನಿಷಾದ್ ಮಧ್ಯೆ ಹಣಾಹಣಿಗೆ ಈಗ ವೇದಿಕೆ ಸಿದ್ಧವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಜೆ.ಪಿ. ಶುಕ್ಲಾ. ಈ ಸಮುದಾಯದ ಮತಗಳು ಬಿಜೆಪಿ ಹಾಗೂ ಮೈತ್ರಿಕೂಟದ ನಡುವೆ ವಿಭಜನೆಯಾಗಲಿವೆ ಎಂಬುದು ಅವರ ಅಭಿಮತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಬೇರಾವ ಸಮುದಾಯಕ್ಕೂ ಸಿಗದಷ್ಟು ಮಾನ್ಯತೆ ಈ ಬಾರಿಯ ಚುನಾವಣೆಯಲ್ಲಿ ನಿಷಾದ್ ಸಮುದಾಯಕ್ಕೆ (ಮೀನುಗಾರರು) ಸಿಕ್ಕಿದೆ.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಗೋರಖಪುರ ಸೇರಿದಂತೆ 10ಕ್ಕೂ ಲೋಕಸಭಾ ಮತಕ್ಷೇತ್ರಗಳಲ್ಲಿ ಈ ಸಮುದಾಯದವರು ಹರಡಿದ್ದು, ಶೇ 12ರಷ್ಟು ಮತದಾರರಿದ್ದಾರೆ.</p>.<p>ನಿಷಾದ್ ಸಮುದಾಯದ ಮತಗಳನ್ನು ಪಡೆಯುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಬಿಎಸ್ಪಿ–ಎಸ್ಪಿ–ಆರ್ಎಲ್ಡಿ ಮಹಾಮೈತ್ರಿಕೂಟವು ಆ ಸಮುದಾಯದ ಮನವೊಲಿಕೆ ಮಾಡಬಹುದು ಎಂಬ ಚಿತ್ರಣ ಆರಂಭದಲ್ಲಿ ಇತ್ತು.</p>.<p>ಇದಕ್ಕೆಲ್ಲಾ ಕಾರಣ ಪ್ರವೀಣ್ ನಿಷಾದ್. ಕಳೆದ ವರ್ಷ ನಡೆದ ಗೋರಖಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ<br />ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದವರು ಇದೇ ನಿಷಾದ್.</p>.<p>ಪ್ರವೀಣ್ ಅವರ ತಂದೆ ಸಂಜಯ್ ನಿಷಾದ್ ಅವರು ‘ನಿಷಾದ್ ಪಕ್ಷ’ದ ಮುಖ್ಯಸ್ಥರು. ಪ್ರವೀಣ್ ಈ ಬಾರಿಯೂ ಗೋರಖಪುರದಿಂದ ಮರು ಆಯ್ಕೆ ಬಯಸಿದ್ದರು. ಮಹಾಮೈತ್ರಿಕೂಟವನ್ನು ಸೇರಿರುವ ನಿಷಾದ್ ಪಕ್ಷಕ್ಕೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಒಂದು ಲೋಕಸಭಾ ಸ್ಥಾವನನ್ನೂ ನೀಡಿದ್ದರು.</p>.<p>ಈ ಬೆಳವಣಿಗೆಯನ್ನು ಮನಗಂಡ ಬಿಜೆಪಿ, ಸಂಜಯ್ ನಿಷಾದ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಯಿತು. ಮಹಾಮೈತ್ರಿಕೂಟವನ್ನು ತೊರೆದ ನಿಷಾದ್ ಪಕ್ಷ, ಗುರುವಾರ ಎನ್ಡಿಎ ತೆಕ್ಕೆಗೆ ಸೇರಿತು.</p>.<p>ಆದರೆ ಇದರಿಂದ ವಿಚಲಿತರಾಗದ ಅಖಿಲೇಶ್, ಬಿಜೆಪಿಗೆ ತಿರುಗೇಟು ನೀಡಿದ್ದಾರೆ, ನಿಷಾದ್ ಸಮುದಾಯದ ಮತ್ತೊಬ್ಬ ಪ್ರಭಾವಿ ವ್ಯಕ್ತಿ ಜಮುನಾ ನಿಷಾದ್ ಅವರ ಹೆಸರನ್ನು ಗೋರಖಪುರ ಕ್ಷೇತ್ರದ ಉಮೇದುವಾರರನ್ನಾಗಿ ಘೋಷಿಸುವ ಮೂಲಕ ಸಡ್ಡು ಹೊಡೆದಿದ್ದಾರೆ.</p>.<p>ಉತ್ತರ ಪ್ರದೇಶದ ಬಲಿಯಾ, ಭದೋಯಿ, ಗೋರಖಪುರ, ಗಾಜಿಪುರ, ಮೀರಜ್ಪುರ, ವಾರಾಣಸಿ, ಅಲಹಾಬಾದ್, ಫತೇಪುರ<br />ಕ್ಷೇತ್ರಗಳಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.</p>.<p>ಡಕಾಯಿತರ ರಾಣಿ ಎನಿಸಿಕೊಂಡಿದ್ದ ಪೂಲನ್ದೇವಿ ಅವರು ನಿಷಾದ್ ಸಮುದಾಯಕ್ಕೆ ಸೇರಿದವರು. ಸಮುದಾಯದ ಬಲದಿಂದಾಗಿ ಅವರು ಎರಡು ಬಾರಿ ಲೋಕಸಭಾ ಸದಸ್ಯರಾಗಿ ಗೆದ್ದು ಬಂದಿದ್ದರು.</p>.<p>ಮಹಾಮೈತ್ರಿಕೂಟದ ನಿಷಾದ್ ಮತ್ತು ಬಿಜೆಪಿಯ ನಿಷಾದ್ ಮಧ್ಯೆ ಹಣಾಹಣಿಗೆ ಈಗ ವೇದಿಕೆ ಸಿದ್ಧವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಜೆ.ಪಿ. ಶುಕ್ಲಾ. ಈ ಸಮುದಾಯದ ಮತಗಳು ಬಿಜೆಪಿ ಹಾಗೂ ಮೈತ್ರಿಕೂಟದ ನಡುವೆ ವಿಭಜನೆಯಾಗಲಿವೆ ಎಂಬುದು ಅವರ ಅಭಿಮತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>