ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡದಿದ್ದರೂ ಸಮಾಧಾನವಾಗುವ ರೀತಿಯಲ್ಲಿ ಪ್ರಾತಿನಿಧ್ಯ ಕೊಡಬೇಕಿತ್ತು. ಅಧಿಕಾರಕ್ಕೆ ಬರುವ ಪಕ್ಷಗಳು ಸಚಿವ ಸಂಪುಟಕ್ಕೂ ಮಹಿಳೆಯರನ್ನು ಪರಿಗಣಿಸಬೇಕು.
ಕೆ. ಪೂರ್ಣಿಮಾ, ಹಿರಿಯೂರು ಬಿಜೆಪಿ ಅಭ್ಯರ್ಥಿ.
ಚುನಾವಣಾ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಬರಬೇಕು. ಪಕ್ಷಗಳು ಟಿಕೆಟ್ ನೀಡಿದಿದ್ದಾಗ ಜನಸೇವೆಯ ಹಂಬಲದೊಂದಿಗೆ ಪಕ್ಷೇತರವಾಗಿ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.