ಬೆಂಗಳೂರು: ನಟ ಡಾ.ವಿಷ್ಣುವರ್ಧನ್ ಅವರ 12ನೇ ಪುಣ್ಯ ಸ್ಮರಣೆ ದಿನವಾದ ಇಂದು (ಡಿ.30) ಅಭಿಮಾನಿಗಳು, ಚಿತ್ರರಂಗದ ಕಲಾವಿದರು ಅವರನ್ನು ನೆನೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಇಂದಿಗೆ 12 ವರ್ಷ. ಅವರು 2009ರ ಡಿಸೆಂಬರ್ 30ರಂದು ನಿಧನರಾದರು.
ಕೆಂಗೇರಿ -ಉತ್ತರಹಳ್ಳಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳಕ್ಕೆ ರಾಜ್ಯದ ವಿವಿಧೆಡೆಯಿಂದ ಬಂದ ಅಭಿಮಾನಿಗಳು ಬೆಳಗ್ಗಿನಿಂದಲೇ ಪೂಜೆ ಸಲ್ಲಿಸುತ್ತಿದ್ದಾರೆ.
ಸಚಿವೆ ಶಶಿಕಲಾ ಜೋಲ್ಲೆ ಅವರು ’ಕನ್ನಡ ಚಿತ್ರರಂಗದ ದಂತಕಥೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.
ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕಲಾಸೇವೆ ಅವಿಸ್ಮರಣೀಯ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ದಂತಕಥೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.
— Shashikala Jolle (@ShashikalaJolle) December 30, 2021
ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕಲಾಸೇವೆ ಅವಿಸ್ಮರಣೀಯ.#Vishnuvardhan pic.twitter.com/lKpMkNaq4J
ಅಭಿಮಾನಿ ಅನಿಲ್ ಸುದೀಪ್ ಎಂಬುವರು ’ಈ ಕೈ ಕರ್ನಾಟಕದ ಆಸ್ತಿ, ಈ 5 ಬೆರಳಲ್ಲಿ ಇರೋದು, ಐದು ಕೋಟಿ ಕನ್ನಡಿಗರ ಶಕ್ತಿ, ಮುಷ್ಟಿ ಮಾಡಿ ಹೊಡೆದರೆ, ಆ ವ್ಯಕ್ತಿ ಮತ್ತೆ ಎದ್ದು ಬಂದಿದ್ದು ಚರಿತ್ರೆಯಲ್ಲೇ ಇಲ್ಲ,, ಜೈ ವಿಷ್ಣು ದಾದಾ ಎಂದು ಟ್ವೀಟ್ ಮಾಡಿದ್ದಾರೆ.
ಈ ಕೈ ಕರ್ನಾಟಕದ ಆಸ್ತಿ, ಈ 5 ಬೆರಳಲ್ಲಿ ಇರೋದು, ಐದು ಕೋಟಿ ಕನ್ನಡಿಗರ ಶಕ್ತಿ, ಮುಷ್ಟಿ ಮಾಡಿ ಹೊಡೆದರೆ, ಆ ವ್ಯಕ್ತಿ ಮತ್ತೆ ಎದ್ದು ಬಂದಿದ್ದು ಚರಿತ್ರೆಯಲ್ಲೇ ಇಲ್ಲ,, ಜೈ ವಿಷ್ಣು ದಾದಾ
— ಅನಿಲ್ ಸುದೀಪ್ (@anilsudip1) December 30, 2021
🙏🙏🙏🔥🔥🔥🔥🔥🔥 #vishnuvardhan #VikrantRonaOnFeb24 #VikrantRоna #KicchaSudeep @KicchaSudeep pic.twitter.com/6dYfgq3jhW
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಪುಣ್ಯತಿಥಿಯಂದು ಗೌರವ ನಮನಗಳು. 200 ಕ್ಕೂ ಅಧಿಕ ಚಿತ್ರಗಳಲ್ಲಿ ಪ್ರತಿಭೆ ತೋರಿ, ಕೋಟ್ಯಂತರ ಅಭಿಮಾನಿಗಳ ಮನ ಗೆದ್ದ ಅವರ ಕಲೆ, ಶ್ರಮ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಪುಣ್ಯತಿಥಿಯಂದು ಗೌರವ ನಮನಗಳು. 200 ಕ್ಕೂ ಅಧಿಕ ಚಿತ್ರಗಳಲ್ಲಿ ಪ್ರತಿಭೆ ತೋರಿ, ಕೋಟ್ಯಂತರ ಅಭಿಮಾನಿಗಳ ಮನ ಗೆದ್ದ ಅವರ ಕಲೆ, ಶ್ರಮ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದೆ.#vishnuvardhan pic.twitter.com/LzWgnRPv72
— Araga Jnanendra (@JnanendraAraga) December 30, 2021
ರಾಮಾಚಾರಿಯಾಗಿ ಕನ್ನಡಿಗರ ಮನಗೆದ್ದು, ಸಾಹಸಸಿಂಹನಾಗಿ ಅಭಿಮಾನಿಗಳ ಹೃದಯದಲ್ಲಿ ಮುತ್ತಿನಹಾರ ಪೋಣಿಸಿದ ದಿಗ್ಗಜ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣಾ ದಿನದಂದು ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳು, ರಾಜಕೀಯ ನಾಯಕರು, ಸಿನಿಮಾರಂಗದ ಗಣ್ಯರು ಸೇರಿದಂತೆ ಸಾವಿರಾರು ಜನರು ವಿಷ್ಣುದಾದಾ ಅವರನ್ನು ನೆನೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿದ್ದಾರೆ.
ಇವತ್ತಿಗೆ ಡಾ||ವಿಷ್ಣುವರ್ಧನ್ ನಮ್ಮನ್ನು ಅಗಲಿ ೧೧ ವರ್ಷಗಳಾಗಿವೆ. ನಾಗರಹಾವು, ಮುತ್ತಿನ ಹಾರ, ನೀ ಬರೆದ ಕಾದಂಬರಿ, ಮದುವೆ ಮಾಡು ತಮಾಷೆ ನೋಡು, ಬಂಧನ, ಭೂತಯ್ಯನ ಮಗ ಅಯ್ಯು, ಸಾಹಸ ಸಿಂಹ, ಸುಪ್ರಭಾತ, ಅವಳ ಹೆಜ್ಜೆ, ವೀರಪ್ಪನಾಯಕ, ಮುಂತಾದ ಸಿನಿಮಾಗಳನ್ನು ಮರೆಯುವುದಾದರೂ ಹೇಗೆ!
— ಅಜ್ಞಾತವಾಸಿ (@CommonM4N) December 30, 2021
ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ 🙏#vishnuvardhan pic.twitter.com/PvtSkL1c47
ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು ಕಲಾಲೋಕವನ್ನು ಬೆಳಗಿದ ಸಾಹಸಸಿಂಹ, ಕನ್ನಡಿಗರ ಪಾಲಿನ ಪ್ರೀತಿಯ ದಾದಾ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಕೋಟಿ ನಮನಗಳು. ಕನ್ನಡ ಭಾಷೆ, ಸಾಂಸ್ಕೃತಿಕ ಲೋಕದ ಬೆಳವಣಿಗೆಗೆ ಅವರ ಕೊಡುಗೆ ಅನನ್ಯವಾದುದು.#vishnuvardhan pic.twitter.com/rLUGONcIsp
— R. Akhanda Srinivas Murthy (@AkhandaSrinivas) December 30, 2021
ಕನ್ನಡ ಚಿತ್ರರಂಗದ ಆಪ್ತಮಿತ್ರ, ಮೇರು ಕಲಾವಿದ, ಸಾಹಸ ಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಮನೆಮನಗಳಲ್ಲಿ ಇವರ ಕಲೆ ಎಂದಿಗೂ ಜೀವಂತ. ಇವರ ಅಪಾರ ಭಾಷಾಭಿಮಾನ, ನಾಡಿನ ಮೇಲಿನ ಪ್ರೀತಿ ಮತ್ತು ಅಭಿಮಾನಿಗಳಿಗೆ ನೀಡಿದ ಗೌರವ ಎಲ್ಲರಿಗೂ ಪ್ರೇರಣೆ.#DrVishnuvardhan #Vishnuvardhan pic.twitter.com/smoX9bINUs
— srinivas v (@sriniva48282025) December 30, 2021
ಕನ್ನಡ ಚಿತ್ರರಂಗದ ಮೇರು ನಟ, ಅಭಿನಯ ಭಾರ್ಗವ, ಸಾಹಸ ಸಿಂಹ,
— IYC Karnataka (@IYCKarnataka) December 30, 2021
ಡಾ ।। ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು
ಅವರನ್ನು ನೆನೆಯುತ್ತ ನಮ್ಮ ಗೌರವಪೂರ್ಣ ನಮನಗಳನ್ನು ಸಲ್ಲಿಸೋಣ #Vishnuvardhan pic.twitter.com/tDI8hUAUSc
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು, ಕನ್ನಡ ಚಿತ್ರರಂಗ ಕಂಡಂತಹ ಮೇರು ನಟನಿಗೆ ನಮ್ಮ ಗೌರವ ಪೂರ್ಣ ನಮನಗಳು.
— Rekha (@JazzyRekha) December 30, 2021
ಡಾ ವಿಷ್ಣುವರ್ಧನ್ ಅವರು ತಮ್ಮ ಅಭಿನಯ ಮತ್ತು ಸರಳ ವ್ಯಕ್ತಿತ್ವದಿಂದ ಕನ್ನಡ ನಾಡು ನುಡಿಗಳ ಸಾಂಸ್ಕೃತಿಕ ಏಕತೆಯ ರಾಯಭಾರಿಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.#Vishnuvardhan pic.twitter.com/Q1Cr5XGy6l
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.