ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟನೆ ನಡೆದಾಗ, ಟಿವಿ ವಾಹಿನಿಗಳು ದರ್ಶನ್ ತೋಟದಲ್ಲಿ ಏನೆಲ್ಲಾ ನಡೆದಿದೆ ಗೊತ್ತಾ? ದರ್ಶನ್ ಏನು ಮಾಡುತ್ತಿದ್ದಾರೆ ಎಂದೆಲ್ಲಾ ಪ್ರಶ್ನಿಸುತ್ತಾ ನಾಲ್ಕು ದಿನಗಳವರೆಗೆ ಕಾರ್ಯಕ್ರಮ ಮಾಡಿದ್ದವು. ಆದರೆ, ಅಪರಾಧಿಗೆ ಶಿಕ್ಷೆ ವಿಧಿಸಿದ್ದನ್ನು ತೋರಿಸಲಿಲ್ಲ. ಇದನ್ನೂ ನಾಲ್ಕು ದಿನಗಳವರೆಗೆ ಪ್ರಸಾರ ಮಾಡಬೇಕಿತ್ತಲ್ಲವೇ? ಅಪರಾಧಿಗೆ ಶಿಕ್ಷೆ ಕೊಡಿಸಲು ಹೋರಾಡಿದ್ದನ್ನು ಜನರಿಗೆ ತಿಳಿಸಬೇಕಿತ್ತಲ್ಲವೇ’ ಎಂದು ತೀರ್ಪಿನ ಪ್ರತಿಯನ್ನು ತೋರಿಸುತ್ತಾ ಪ್ರಶ್ನಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.