ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ

ಅಕ್ಷರ ಗಾತ್ರ

ಬೆಂಗಳೂರು: ಪುನೀತ್ ಅಭಿನಯದಕನ್ನಡದ ಬ್ಲಾಕ್‌ ಬಸ್ಟರ್ ಸಿನಿಮಾ ರಾಜಕುಮಾರ ಖ್ಯಾತಿಯಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಸ್ವಾಮಿ ನಿತ್ಯಾನಂದ ಅವರ ಬಗ್ಗೆನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿತ್ತು. ಇದೀಗ ಆ ಬಗ್ಗೆ ಸ್ವತಃ ಪ್ರಿಯಾ ಆನಂದ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಏನು ಹೇಳಿದ್ದರು ಪ್ರಿಯಾ?

ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾತನಾಡಿದ್ದಪ್ರಿಯಾ, ‘ನಾನು ನಿತ್ಯಾನಂದ ಸ್ವಾಮಿ ಅವರೊಂದಿಗೆ ಮದುವೆಯಾಗಬೇಕು ಎಂದು ಬಯಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದರು.

ನಿತ್ಯಾನಂದರ ಬಗ್ಗೆಹಲವು ಆರೋಪಗಳು ಕೇಳಿಬಂದಿವೆ. ಆದರೂ ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿತ್ಯಾನಂದನ ಹೇಳಿಕೆಗಳನ್ನು ನಟಿ ಪ್ರಿಯಾ ಆನಂದ್ ಕೂಡ ಹಾಗಾಗೇ ಹಂಚಿಕೊಂಡಿದ್ದರು. ಈ ಕುರಿತು ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ನಿತ್ಯಾನಂದ ಅವರನ್ನು ಮದುವೆಯಾಗಲು ಬಯಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ನಿತ್ಯಾನಂದ ವಿರುದ್ಧ ಹಲವು ಆರೋಪಗಳಿರಬಹುದು. ಆದರೆ, ಅವರನ್ನು ಅನೇಕರು ಇಷ್ಟಪಡುತ್ತಾರೆ. ಹಾಗಾದರೇ ಅವರಲ್ಲಿ ಏನಾದರೂ ವಿಶೇಷ ಗುಣ ಇರಬೇಕಾಲ್ಲವೇ ಎಂದು ಪ್ರಶ್ನಿಸಿರುವ ಪ್ರಿಯಾ, ನಾನು ಅವರೊಂದಿಗೆ ಮದುವೆಯಾದರೆ ಸರ್‌ನೇಮ್ ಕೂಡ ಬದಲಾಯಿಸಬೇಕಾಗಿಲ್ಲ. ನಮ್ಮಿಬ್ಬರ ಹೆಸರು ಒಂದೇ ರೀತಿ ಇದೆ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಪ್ರಿಯಾ ಆನಂದ್ ಸ್ಪಷ್ಟನೆ

ಪ್ರಿಯಾ ಆನಂದ್ ಅವರ ಈ ಹೇಳಿಕೆ ವೈರಲ್ ಆದ ಮೇಲೆ ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ನಾನು ಹೇಳಿರುವುದು ಕೇವಲ ತಮಾಷೆಗಾಗಿ. ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ’ ಎಂದು ಹೇಳಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದೆ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾ ಆನಂದ್, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ನಟ ಪುನೀತ್ ರಾಜಕುಮಾರ್‌ ಅವರೊಂದಿಗೆ ‘ರಾಜಕುಮಾರ’, ‘ಜೇಮ್ಸ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT