ಗಾಯನ ಲೋಕದ ದಿಗ್ಗಜ ಎಸ್.ಪಿ. ಬಾಲಸುಬ್ರಹ್ಮಣಂ ಅವರ ಸಾವಿಗೆ ಸಂತಾಪ ಸೂಚಿಸಿ ಭಾರತ ಚಿತ್ರರಂಗ ಹಾಗೂ ಸಂಗೀತ ಲೋಕದ ಅನೇಕರು ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರನಟ ಗಣೇಶ್ ‘ಓಂ ಶಾಂತಿ’ ಎಂದು ಟ್ವೀಟ್ ಮಾಡುವ ಮೂಲಕ ವಿದಾಯ ಹೇಳಿದ್ದಾರೆ.
OM Shanthi.#SPBalasubrahmanyam pic.twitter.com/T0zpyaZ85m
— Ganesh (@Official_Ganesh) September 25, 2020
‘ತಮ್ಮ ಸುಮಧುರ ಕಂಠದಿಂದ 50ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ ನಿಮ್ಮ ದಾಸ ದರ್ಶನ್’ ಎಂದು ಬರೆದಿದ್ದಾರೆ ನಟ ದರ್ಶನ್ ತೂಗುದೀಪ್.
ತಮ್ಮ ಸುಮಧುರ ಕಂಠದಿಂದ ೫೦ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂ ರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ
— Darshan Thoogudeepa (@dasadarshan) September 25, 2020
ನಿಮ್ಮ ದಾಸ ದರ್ಶನ್ pic.twitter.com/PfqOCWsraC
ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ತಮನ್ ಎಸ್. ‘ಮಾಮ ನನಗೆ ಕಣ್ಣೀರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹೃದಯ ತುಂಬಾ ಭಾರವಾಗಿದೆ’ ಎಂದು ಬರೆದುಕೊಂಡಿದ್ದಾರೆ.
Mammmmmmmaaaaa 😢 not Able to control my tears .
— thaman S (@MusicThaman) September 25, 2020
Will misssss U dear maammmmmaaa 😔👏🏾
Heart 💔 is So HEAVY 🙏🏾 pic.twitter.com/niu0dQ0je7
‘ಎಸ್ಪಿಬಿ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ತುಂಬಾನೇ ಬೇಸರವಾಗಿದೆ. ಅವರ ಮಧುರ ಧ್ವನಿ ಸದಾ ನೆನಪಿನಲ್ಲಿರುತ್ತದೆ’ ಎಂದು ಬರೆದುಕೊಂಡಿದ್ದಾರೆ ನಟ ಪುನೀತ್ ರಾಜ್ಕುಮಾರ್.
Unable to process the fact that #SPBalasubramaniam garu is no more. Nothing will ever come close to that soulful voice of his. Rest in peace sir. Your legacy will live on. Heartfelt condolences and strength to the family 🙏
— Mahesh Babu (@urstrulyMahesh) September 25, 2020
‘ಅಘಾತವಾಗಿದೆ’ ಎಂದು ಬರೆದುಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್.
#ripspb ...Devastated pic.twitter.com/EO55pd648u
— A.R.Rahman (@arrahman) September 25, 2020
ಈ ಬಗ್ಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ನಟ ಮಹೇಶ್ ಬಾಬು ‘ಎಸ್ಪಿಬಿ ಅವರು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಮಧುರ ದನಿಗೆ ಸಾರಿಸಾಟಿ ಬೇರಿಲ್ಲ. ನಿಮ್ಮ ಹಾಡುಗಳು ನಮ್ಮೊಂದಿಗೆ ಸದಾ ಜೀವಂತವಾಗಿರುತ್ತದೆ. ನಿಮ್ಮ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
Unable to process the fact that #SPBalasubramaniam garu is no more. Nothing will ever come close to that soulful voice of his. Rest in peace sir. Your legacy will live on. Heartfelt condolences and strength to the family 🙏
— Mahesh Babu (@urstrulyMahesh) September 25, 2020
‘ಸದಾ ನಗುಮೊಗದ ಎಸ್ಪಿಬಿ ಇನ್ನಿಲ್ಲ ಎಂಬ ವಿಷಯ ಕೇಳಿ ಅಘಾತವಾಗಿದೆ. ನಿಮ್ಮ ಅಗಲಿಕೆ ತುಂಬಲಾರದ ನಷ್ಟ’ ಎಂದು ಬರೆದುಕೊಂಡಿದ್ದಾರೆ ನಟ ರಾಮ್ ಚರಣ್. ಎಸ್ಪಿಬಿ ಸಾವಿಗೆ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿರುವ ನಟ ಜಗ್ಗೇಶ್
‘ಯಾರ ಕಣ್ಣು ತಾಕಿತು!
ಯಾವತಪ್ಪಿಗೆ ನಿಮಗೆ ಈಶಿಕ್ಷೆ!
ಇನ್ನು ಎಷ್ಟು ಸಾಧಕರು
ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು!
ವಿಶ್ವಶಾಂತಿ ಭಂಗಕ್ಕೆ ಕೊರೋನ
ಹರಡಿ ಮಳ್ಳಿಯಂತ ದರಿದ್ರದೇಶ
ಚೀನವನ್ನ ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು!
ನನ್ನನೆಚ್ಚಿನ ಹೃದಯವನ್ನ ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ!
ಓಂಶಾಂತಿ.!’ ಎಂದು ಬರೆದುಕೊಂಡಿದ್ದಾರೆ.
ಯಾರ ಕಣ್ಣು ತಾಕಿತು!
— ನವರಸನಾಯಕ ಜಗ್ಗೇಶ್ (@Jaggesh2) September 25, 2020
ಯಾವತಪ್ಪಿಗೆ ನಿಮಗೆ ಈಶಿಕ್ಷೆ!
ಇನ್ನು ಎಷ್ಟು ಸಾಧಕರು
ಈಸಾವಿನ ಶಿಕ್ಷೆಗೆ ಸಾಲು ನಿಂತಿಹರು!
ವಿಶ್ವಶಾಂತಿ ಭಂಗಕ್ಕೆ ಕೊರೋನ
ಹರಡಿ ಮಳ್ಳಿಯಂತ ದರಿದ್ರದೇಶ
ಚೀನವನ್ನ ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು!
ನನ್ನನೆಚ್ಚಿನ ಹೃದಯವನ್ನ ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ!
ಓಂಶಾಂತಿ.! pic.twitter.com/LeofEAchHe
‘ಎಸ್ಪಿಬಿ ಅವರ ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ.ಕೆಲ ತಿಂಗಳ ಹಿಂದೆ ನಾನು ಅವರೊಂದಿಗೆ ಮಾತನಾಡಿದ್ದೆ. ಆಗ ಅವರು ಆರೋಗ್ಯದಿಂದಿದ್ದರು. ಜೀವನ ನಿಜಕ್ಕೂ ಅನಿರೀಕ್ಷಿತ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Deeply saddened to hear about the demise of Balasubrahmanyam ji.Just a few months back I’d interacted with him during a virtual concert in this lockdown..he seemed hale,hearty & his usual legendary self...life is truly unpredictable. My thoughts & prayers with his family🙏🏻#RIPSPB pic.twitter.com/NytdM7YhBL
— Akshay Kumar (@akshaykumar) September 25, 2020
‘ಗಾಯನ ನಿಂತಿದೆ ಹಾಡುಗಳಲ್ಲ... ಉಸಿರು ನಿಂತಿದೆ ಹೆಸರಲ್ಲ.... ಪ್ರತಿ ಸಾರಿ ನಿಮ್ಮ ಧ್ವನಿ ಕೇಳಿದಾಗಲೂ ನೀವು ಜೀವಿಸುತ್ತೀರಿ ನಮ್ಮಲ್ಲಿ #RIPSPB sir OM Shanthi’ ಎಂದು ಬರೆದುಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ರಾಮ್.
ಗಾಯನ ನಿಂತಿದೆ ಹಾಡುಗಳಲ್ಲ... ಉಸಿರು ನಿಂತಿದೆ ಹೆಸರಲ್ಲ.... ಪ್ರತಿ ಸಾರಿ ನಿಮ್ಮ ಧ್ವನಿ ಕೇಳಿದಾಗಲೂ ನೀವು ಜೀವಿಸುತ್ತೀರಿ ನಮ್ಮಲ್ಲಿ, ಈ ನಾಡಲ್ಲಿ🙏🙏🙏 #RIPSPB sir OM Shanthi pic.twitter.com/zlsQHQ6Bqa
— Santhosh Ananddram (@SanthoshAnand15) September 25, 2020
‘ಭಾರತೀಯ ಸಂಗೀತ ಜಗತ್ತು ಪ್ರೀತಿಯ ಮಗನನ್ನು ಅಗಲಿದೆ. ಐದು ದಶಕಗಳ ಸಂಗೀತ ಪಯಣದಲ್ಲಿ 40,000ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದಾರೆ ಎಸ್ಪಿಬಿ. ವಿಶ್ವದಲ್ಲಿ ಸಂಗೀತ ಜೀವಿಸುವವರೆಗೂ ನೀವು ಜೀವಂತವಾಗಿರುತ್ತೀರಿ ಸರ್’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ನಟ ಜ್ಯೂನಿಯರ್ ಎನ್ಟಿಆರ್.
Indian Music has lost its favourite son. Devastated! In a Legendary career spanning over five decades,Padma Bhushan S.P Balasubrahmanyam Garu has breathed life into over 40,000 songs. As long as music exists in this universe, you will live on sir 🙏🏻
— Jr NTR (@tarak9999) September 25, 2020
ನಿರ್ದೇಶಕ ಪವನ್ ಒಡೆಯರ್ ಟ್ವೀಟ್ ಮಾಡಿ ‘ಸಾವು ನಿಮ್ಮ ಜೀವನವನ್ನು ಅಂತ್ಯಗೊಳಿಸಿರಬಹುದು. ಆದರೆ ಜನರೊಂದಿಗಿನ ನಿಮ್ಮ ಭಾಂಧವ್ಯ ಶಾಶ್ವತ’ ಎಂದು ಬರೆದುಕೊಂಡಿದ್ದಾರೆ.
Death could just end your life sir. But your relationship with people is everlasting.#SPBalasubrahmanyam sir pic.twitter.com/10rIhyGrtD
— Pavan Wadeyar (@PavanWadeyar) September 25, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.