ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲು ಅರ್ಜುನ್‌ಗೆ ಆಕ್ಷನ್‌ ಕಟ್ ಹೇಳುವರೇ ತಮಿಳಿನ ಮುರುಗದಾಸ್‌?

Last Updated 3 ಫೆಬ್ರುವರಿ 2020, 5:27 IST
ಅಕ್ಷರ ಗಾತ್ರ

'ಅಲಾ ವೈಕುಂಠಪುರಮುಲೋ’ ಚಿತ್ರದ ಯಶಸ್ಸಿನ ಅಲೆಯಲ್ಲಿ ಅಲ್ಲು ಅರ್ಜುನ್‌ ತೇಲುತ್ತಿದ್ದಾರೆ.ಈಗಾಗಲೇ ನಿರ್ದೇಶಕ ಸುಕುಮಾರ್ ಅವರು ಅಲ್ಲುಗೆ ಆ್ಯಕ್ಷನ್‌ ಕಟ್‌ ಹೇಳಲು ಸಿದ್ಧವಾಗುತ್ತಿದ್ದಾರೆ. ಈ ನಡುವೆಯೇ ಎ.ಆರ್‌. ಮುರುಗದಾಸ್‌ ಅವರೂ ಸ್ಟೈಲಿಶ್‌ ಸ್ಟಾರ್‌ಗೆ ಕಥೆ ಹೇಳಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ತಮಿಳಿನ ನಿರ್ದೇಶಕ ಮುರುಗದಾಸ್‌ ಅವರು ಈ ಹಿಂದೆ ತೆಲುಗಿನ ಚಿರಂಜೀವಿ ಮತ್ತು ಮಹೇಶ್‌ ಬಾಬು ಅವರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ಈಗ ಅಲ್ಲು ಅರ್ಜುನ್‌ ಜೊತೆ ಸಿನಿಮಾ ಮಾಡುವ ಇಂಗಿತ ಹೊಂದಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಮುರುಗದಾಸ್‌ ನಿರ್ದೇಶನದ ದರ್ಬಾರ್‌ ಸೋಲು ಕಂಡಿರುವುದರಿಂದ, ಅವರೊಂದಿಗೆ ಸಿನಿಮಾ ಮಾಡಲು ಅಲ್ಲು ಅರ್ಜುನ್‌ ಒಪ್ಪುದಿಲ್ಲ ಎಂದೇ ಅನೇಕರು ಊಹಿಸಿದ್ದರು. ಆದರೆ, ಅದ್ಯಾವುದನ್ನು ಲೆಕ್ಕಿಸದ ಅಲ್ಲು,ಪೂರ್ಣ ಕಥೆ ಹೇಳುವಂತೆ ಕೇಳಿದ್ದಾರೆ.

ಕಥೆ ಇಷ್ಟವಾದರೆ, ಸುಕುಮಾರ್‌ ಅವರ ಸಿನಿಮಾ ಮುಗಿದ ನಂತರ ಮುರುಗದಾಸ್‌ಜೊತೆ ಕೆಲಸ ಮಾಡುವುದಾಗಿಯೂ ಸ್ಟೈಲಿಶ್‌ ಸ್ಟಾರ್‌ ಭರವಸೆ ನೀಡಿದ್ದಾರೆ. ಈ ಹಿಂದೆನಿರ್ದೇಶಕ ಲಿಂಗುಸ್ವಾಮಿಗೂ ಇದೇ ರೀತಿಯ ಆಶ್ವಾಸನ್ನು ಅರ್ಜುನ್‌ ನೀಡಿದ್ದರು. ಆದರೆ, ಸಂಪೂರ್ಣ ಕಥೆ ಕೇಳಿದ ನಂತರ ಸ್ಕ್ರಿಪ್ಟ್‌ ಇಷ್ಟವಾಗದೆ ಸಿನಿಮಾ ಸೆಟ್ಟೇರಲಿಲ್ಲ. ಮುರುಗದಾಸ್‌ ಅವರಿಗೆ ತೆಲುಗಿನ ಈ ನಟ ಕಾಲ್‌ಶೀಟ್‌ ನೀಡುವರೇ ಎನ್ನುವುದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT