ಮಾ.ನಿಶಾಂತ್ ಟಿ.ರಾಠೋಡ್, ಅಲೋಕ್, ವಿಘ್ನೇಶ್ ಭರಮಸಾಗರ, ಸೋಮನಾಥ, ಶಾಶ್ವತಿ ಸೇರಿದಂತೆ ಹದಿನಾಲ್ಕು ಮಕ್ಕಳು ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ರಮೇಶ್ಭಟ್, ಬ್ಯಾಂಕ್ ಜನಾರ್ದನ್, ಉಮೇಶ್, ಮೈಸೂರು ಮಲ್ಲೇಶ್, ರಿಕ್ಕಿ, ಮಂಜುಳಾರೆಡ್ಡಿ, ಅಂಜಲಿ, ಆನಂದ್ ನಟಿಸಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಮತ್ತು ಪತ್ರಕರ್ತ ವಿಜಯಭರಮಸಾಗರ ವಿರಚಿತ ಒಟ್ಟು ನಾಲ್ಕು ಗೀತೆಗಳಿಗೆ ವೀರ್ಸಮರ್ಥ್ ಸಂಗೀತ ಸಂಯೋಜನೆ ಇದೆ. ಛಾಯಾಗ್ರಹಣ ನಂದಕುಮಾರ್, ಸಂಕಲನ ಅರ್ಜುನ್, ನೃತ್ಯ ಕಂಬಿರಾಜ್ ಅವರದಾಗಿದೆ. ಬಿಜಾಪುರ, ಕುಂದಾಪುರದ ಕಮಲಶಿಲೆ ಗುಹೆಯಲ್ಲಿ ಒಟ್ಟು 32 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.