‘ಮಾ’ ಅಧ್ಯಕ್ಷ ನರೇಶ್ ಮತ್ತು ರಾಜಶೇಖರ್ ನಡುವೆ ಅನೇಕ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಸಮಾರಂಭದಲ್ಲಿ ಹೊರಬಿತ್ತು. ವೇದಿಕೆ ಏರಿದ ರಾಜಶೇಖರ್ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡರು. ಅವರನ್ನು ತಡೆಯಲು ಚಿರಂಜೀವಿ, ಜಯಸುಧಾ, ಮೋಹನ್ ಬಾಬು, ಕೃಷ್ಣಂರಾಜು ಯತ್ನಿಸಿದರು. ಸಿಟ್ಟಿನಿಂದಲೇ ರಾಜಶೇಖರ್ ಅಲ್ಲಿಂದ ತೆರಳಿದರು.