ರಾಜಮೌಳಿ ನಿರ್ದೇಶನದ ಬಹುಕೋಟಿಯ ಚಿತ್ರ ‘ಆರ್ಆರ್ಆರ್’ ಮತ್ತು ಅಲ್ಲು ಅರ್ಜುನ್ ನಟನೆಯ ‘ತ್ರಿವಿಕ್ರಮ್’ನಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ ಕಿಯಾರಾ. ಅಲ್ಲದೆ ಅರ್ಜುನ್ ರೆಡ್ಡಿ ರೀಮೇಕ್ ‘ಕರಣ್ ಸಿಂಗ್’ನ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಹಾಜರಿರಲೇಬೇಕಾಗಿದೆ. ಹಾಗಾಗಿದಿನಾಂಕ ಹೊಂದಾಣಿಕೆ ಮಾಡಲಾಗದ ಕಾರಣ ಚಿತ್ರೀಕರಣ ಮುಂದಕ್ಕೆ ಹೋಗುತ್ತಲೇ ಇದೆ. ಹಾಗಂತ ಜೂನಿಯರ್ ಅಕ್ಕಿನೇನಿ ರಾಜಿಯಾಗುವ ಲಕ್ಷಣಗಳೂ ಕಾಣುತ್ತಿಲ್ಲ.