ಘಟನಾ ಸಂದರ್ಭದಲ್ಲಿ ದಂಪತಿಯ ಮನೆ ಸಮೀಪವೇ ನೀರಿನ ಪೈಪ್ಲೈನ್ ದುರಸ್ತಿ ಮಾಡುತ್ತಿದ್ದ ನಗರಸಭೆಯ ವಾಲ್ಮನ್ ದೇವರಾಜ್, ಮನ್ಮಥರೆಡ್ಡಿ ಅವರು ಕಳ್ಳರೆಂದು ಕೂಗುತ್ತಿರುವುದನ್ನು ಕೇಳಿ ಅನುಮಾನಗೊಂಡು ದುಷ್ಕರ್ಮಿಗಳ ಬೈಕ್ಗೆ ಕಾಲಿನಿಂದ ಒದ್ದು ಬಿಳಿಸಿದ್ದಾರೆ. ನಂತರ ದುಷ್ಕರ್ಮಿಗಳು ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.