‘ಲಾಕ್ಡೌನ್ನಿಂದಾಗಿ ಎಲ್ಲರೂ ಸಂಕಷ್ಟದಲ್ಲಿ ಇದ್ದೇವೆ. ಚಿತ್ರರಂಗದಲ್ಲಿ ಲೈಟ್ಬಾಯ್ಸ್ನಿಂದ ಹಿಡಿದು ನಿರ್ಮಾಪಕರೂ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವವರಿಗೆ ಜೀವನ ನಡೆಸಲು ಕಷ್ಟವಾಗಿದೆ. ಎಲ್ಲರಿಗೂ ಪ್ಯಾಕೆಜ್ ಘೋಷಿಸಿರುವಾಗ, ಚಿತ್ರರಂಗಕ್ಕೂ ಆರ್ಥಿಕ ಪ್ಯಾಕೆಜ್ ಘೋಷಿಸಬೇಕು. ಈ ಹಿಂದೆ ನಮ್ಮ ಕಷ್ಟ ಸುಖ ಹೇಳಲು ಡಾ.ರಾಜ್ಕುಮಾರ್, ಅಂಬರೀಷ್ ಇದ್ದರು. ನಮ್ಮ ಧ್ವನಿಯಾಗಿದ್ದ ಇವರು, ಇಂತಹ ಪರಿಸ್ಥಿತಿ ಬಂದಾಗ ನಿಭಾಯಿಸಿದ್ದರು’ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೇಳಿದರು.