ಎನ್.ಎಸ್. ರಾಜಕುಮಾರ್ ತಮ್ಮ ಓಂಕಾರ್ ಫಿಲಂಸ್ ಮೂಲಕ ‘ರಮ್ಯ ರಾಮಸ್ವಾಮಿ’ ಎಂಬ ಚಿತ್ರವನ್ನು ಸದ್ಯದಲ್ಲೇ ಆರಂಭಿಸಲಿದ್ದು, ನಾಯಕನ ಪಾತ್ರಕ್ಕೆ ರವಿಚಂದ್ರ ವಿ. ಬಣ್ಣಹಚ್ಚಲಿದ್ದಾರೆ. ಜನಾರ್ದನ ಮಹರ್ಷಿ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಚಿ.ಗುರುದತ್ ನಿರ್ದೇಶನದಲ್ಲಿ ಈ ಚಿತ್ರ ತೆರೆ ಮೇಲೆ ಬರಲಿದೆ. ‘ರಾಮಸ್ವಾಮಿ’ ಪಾತ್ರದಲ್ಲಿ ರವಿಚಂದ್ರ ವಿ. ಅವರು ಕಾಣಿಸಿಕೊಳ್ಳಲಿದ್ದು, ‘ರಮ್ಯ’ ಪಾತ್ರದಲ್ಲಿ ಯಾರು ನಟಿಸುತ್ತಿದಾರೆಂಬ ಕುತೂಹಲ ಎಲ್ಲರಲ್ಲೂ ಇದೆ. ‘ಆ ಪಾತ್ರದಲ್ಲಿ ಖ್ಯಾತ ನಟಿಯೊಬ್ಬರು ನಟಿಸಲಿದ್ದು, ಅವರು ಯಾರು ಎನ್ನುವುದನ್ನು ಶೀಘ್ರದಲ್ಲೇ ತಿಳಿಸಲಾಗುವುದು’ ಎಂದು ನಿರ್ಮಾಪಕರು ತಿಳಿಸಿದ್ದಾರೆ.