<p>‘ವೈಕುಂಠವನ್ನು ನೋಡಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅದೇ ಆಸೆ ನಾನು ನಿರ್ದೇಶಿಸುತ್ತಿರುವ ಸಿನಿಮಾದ ಪಾತ್ರಗಳಿಗೂ ಇದೆ. ಹಾಗಾಗಿಯೇ ನಾನು ಈ ಸಿನಿಮಾಕ್ಕೆ ದಾರಿ ಯಾವುದಯ್ಯಾ ವೈಕುಂಠಕೆ ಎಂಬ ಶೀರ್ಷಿಕೆ ಇಟ್ಟಿದ್ದೇನೆ...’</p>.<p>–ಹೀಗೆ ಹೇಳಿ ತಮ್ಮ ಹೊಸ ಸಿನಿಮಾ ಬಗ್ಗೆ ಒಂದಿಷ್ಟು ಕುತೂಹಲ ಮೂಡುವಂತೆ ಮಾಡಿದರು ನಿರ್ದೇಶಕ ಸಿದ್ದು ಪೂರ್ಣಚಂದ್ರ. ಅವರು ತಮ್ಮ ಚಿತ್ರದ ಮುಹೂರ್ತ ಕಾರ್ಯಕ್ರಮ ಪೂರ್ಣಗೊಳಿಸಿ, ಪತ್ರಿಕಾಗೋಷ್ಠಿಯಲ್ಲಿ ಮೈಕ್ ಹಿಡಿದು ಕುಳಿತಿದ್ದರು.</p>.<p>ಹಾರರ್, ಥ್ರಿಲ್ಲರ್, ಸಸ್ಪೆನ್ಸ್, ಕಾಮಿಡಿ... ಹೀಗೆ ಯಾವುದೇ ಪ್ರಕಾರದ ಚೌಕಟ್ಟಿನ ವ್ಯಾಪ್ತಿಗೆ ಬರುವ ಸಿನಿಮಾ ಇದಲ್ಲ ಎನ್ನುವ ಸ್ಪಷ್ಟನೆಯನ್ನು ಸಿನಿಮಾ ತಂಡ ನೀಡಿದೆ. ‘ಈ ಚಿತ್ರದ ಶೇಕಡ 80ರಷ್ಟು ಭಾಗದ ಚಿತ್ರೀಕರಣ ನಡೆಯುವುದು ಸ್ಮಶಾನದಲ್ಲಿ. ಹೀಗಿದ್ದರೂ ಈ ಚಿತ್ರವು ವೀಕ್ಷಕರಿಗೆ ಬೋರು ಹೊಡೆಸುವುದಿಲ್ಲ. ಚಿತ್ರವು ವೀಕ್ಷಕರಿಗೆ ವೈಕುಂಠದ ದರ್ಶನ ಮಾಡಿಸುವುದು ಖಂಡಿತ’ ಎನ್ನುವ ಭರವಸೆಯನ್ನೂ ನೀಡಿದರು.</p>.<p>‘ತಿಥಿ’ ಚಿತ್ರದ ಪೊಜಾ ಅವರು ಇದರಲ್ಲಿ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ನನ್ನ ಪಾತ್ರವು ಸ್ಮಶಾನದಲ್ಲಿ ಪ್ರತಿದಿನವೂ ಹೆಣಗಳನ್ನು ನೋಡುತ್ತಿರುತ್ತದೆ. ಹೀಗಿದ್ದರೂ ಆ ಪಾತ್ರವು ಪ್ರೀತಿಯನ್ನು ಬಹಳ ಗೌರವದಿಂದ ಕಾಣುತ್ತದೆ’ ಎಂದು ತಮ್ಮ ಪಾತ್ರದ ಅಸ್ಪಷ್ಟ ಚಿತ್ರಣವೊಂದನ್ನು ನೀಡಿದರು ಪೂಜಾ. ಇವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಭಿನ್ನವಾದ, ವಿಶೇಷವಾದ ಪಾತ್ರ ಈ ಚಿತ್ರದಲ್ಲಿ ಇದೆಯಂತೆ.</p>.<p>ವರ್ಧನ್ ಅವರು ಚಿತ್ರದ ನಾಯಕ ನಟ. ‘ಹಫ್ತಾ ಚಿತ್ರದಲ್ಲಿ ನಟಿಸಿದ ನಂತರ ನಾನು ಹಲವು ಕಥೆಗಳಿಗೆ ಕಿವಿಗೊಟ್ಟೆ. ಆದರೆ ಅವ್ಯಾವುದನ್ನೂ ಒಪ್ಪಿಕೊಳ್ಳಲಿಲ್ಲ. ಈ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಇದು ಒಬ್ಬ ಕ್ರಿಮಿನಲ್ನ ಕಥೆ’ ಎಂದರು ವರ್ಧನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ವೈಕುಂಠವನ್ನು ನೋಡಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅದೇ ಆಸೆ ನಾನು ನಿರ್ದೇಶಿಸುತ್ತಿರುವ ಸಿನಿಮಾದ ಪಾತ್ರಗಳಿಗೂ ಇದೆ. ಹಾಗಾಗಿಯೇ ನಾನು ಈ ಸಿನಿಮಾಕ್ಕೆ ದಾರಿ ಯಾವುದಯ್ಯಾ ವೈಕುಂಠಕೆ ಎಂಬ ಶೀರ್ಷಿಕೆ ಇಟ್ಟಿದ್ದೇನೆ...’</p>.<p>–ಹೀಗೆ ಹೇಳಿ ತಮ್ಮ ಹೊಸ ಸಿನಿಮಾ ಬಗ್ಗೆ ಒಂದಿಷ್ಟು ಕುತೂಹಲ ಮೂಡುವಂತೆ ಮಾಡಿದರು ನಿರ್ದೇಶಕ ಸಿದ್ದು ಪೂರ್ಣಚಂದ್ರ. ಅವರು ತಮ್ಮ ಚಿತ್ರದ ಮುಹೂರ್ತ ಕಾರ್ಯಕ್ರಮ ಪೂರ್ಣಗೊಳಿಸಿ, ಪತ್ರಿಕಾಗೋಷ್ಠಿಯಲ್ಲಿ ಮೈಕ್ ಹಿಡಿದು ಕುಳಿತಿದ್ದರು.</p>.<p>ಹಾರರ್, ಥ್ರಿಲ್ಲರ್, ಸಸ್ಪೆನ್ಸ್, ಕಾಮಿಡಿ... ಹೀಗೆ ಯಾವುದೇ ಪ್ರಕಾರದ ಚೌಕಟ್ಟಿನ ವ್ಯಾಪ್ತಿಗೆ ಬರುವ ಸಿನಿಮಾ ಇದಲ್ಲ ಎನ್ನುವ ಸ್ಪಷ್ಟನೆಯನ್ನು ಸಿನಿಮಾ ತಂಡ ನೀಡಿದೆ. ‘ಈ ಚಿತ್ರದ ಶೇಕಡ 80ರಷ್ಟು ಭಾಗದ ಚಿತ್ರೀಕರಣ ನಡೆಯುವುದು ಸ್ಮಶಾನದಲ್ಲಿ. ಹೀಗಿದ್ದರೂ ಈ ಚಿತ್ರವು ವೀಕ್ಷಕರಿಗೆ ಬೋರು ಹೊಡೆಸುವುದಿಲ್ಲ. ಚಿತ್ರವು ವೀಕ್ಷಕರಿಗೆ ವೈಕುಂಠದ ದರ್ಶನ ಮಾಡಿಸುವುದು ಖಂಡಿತ’ ಎನ್ನುವ ಭರವಸೆಯನ್ನೂ ನೀಡಿದರು.</p>.<p>‘ತಿಥಿ’ ಚಿತ್ರದ ಪೊಜಾ ಅವರು ಇದರಲ್ಲಿ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ನನ್ನ ಪಾತ್ರವು ಸ್ಮಶಾನದಲ್ಲಿ ಪ್ರತಿದಿನವೂ ಹೆಣಗಳನ್ನು ನೋಡುತ್ತಿರುತ್ತದೆ. ಹೀಗಿದ್ದರೂ ಆ ಪಾತ್ರವು ಪ್ರೀತಿಯನ್ನು ಬಹಳ ಗೌರವದಿಂದ ಕಾಣುತ್ತದೆ’ ಎಂದು ತಮ್ಮ ಪಾತ್ರದ ಅಸ್ಪಷ್ಟ ಚಿತ್ರಣವೊಂದನ್ನು ನೀಡಿದರು ಪೂಜಾ. ಇವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಭಿನ್ನವಾದ, ವಿಶೇಷವಾದ ಪಾತ್ರ ಈ ಚಿತ್ರದಲ್ಲಿ ಇದೆಯಂತೆ.</p>.<p>ವರ್ಧನ್ ಅವರು ಚಿತ್ರದ ನಾಯಕ ನಟ. ‘ಹಫ್ತಾ ಚಿತ್ರದಲ್ಲಿ ನಟಿಸಿದ ನಂತರ ನಾನು ಹಲವು ಕಥೆಗಳಿಗೆ ಕಿವಿಗೊಟ್ಟೆ. ಆದರೆ ಅವ್ಯಾವುದನ್ನೂ ಒಪ್ಪಿಕೊಳ್ಳಲಿಲ್ಲ. ಈ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಇದು ಒಬ್ಬ ಕ್ರಿಮಿನಲ್ನ ಕಥೆ’ ಎಂದರು ವರ್ಧನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>