ಸನ್ನಿವೇಶಶ ಹೀಗಿದೆ: ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿರುವ ರಾಹುಲ್ ದ್ರಾವಿಡ್ ಸಿಕ್ಕಾಪಟ್ಟೆ ಸಿಡುಕುತ್ತಾರೆ. ಹೊಡೆದುಬಿಡುತ್ತೇನೆ ಎನ್ನುತ್ತಾರೆ. ಪಕ್ಕದ ಕಾರಿನ ಮೇಲೆ ಪಾನೀಯ ಎರಚುತ್ತಾರೆ. ಆ ಕಾರಿನ ಮಿರರನ್ನು ಬ್ಯಾಟಿನಿಂದ ಚಚ್ಚಿಹಾಕುತ್ತಾರೆ. ಕಾರಿನ ರೂಫ್ಟಾಪ್ ಗಾಜು ತೆರೆದು ನಿಂತುಕೊಂಡು, ‘ಇಂದಿರಾನಗರ ಕಾ ಗೂಂಡಾ ಹೂಂ ಮೇ’ ಎಂದು ಆಕ್ರೋಶಭರಿತರಾಗಿ ನುಡಿಯುತ್ತಾರೆ.