<p>‘ಕೈವ’ ಬಳಿಕ ಧನ್ವೀರ್ ನಟನೆಯಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರುವರಿ 27ರಂದು ಹಯಗ್ರೀವ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಈ ಸಿನಿಮಾದ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ.</p><p>ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ನಲ್ಲಿ ಹಯಗ್ರೀವ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಧನ್ವೀರ್ ಜೊತೆಗೆ ಗಿಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಧನ್ವೀರ್ ಅವರ ಹಿಂದೆ ನಿಂತುಕೊಂಡ ಗಿಲ್ಲಿ ನಟ ‘ಏಯ್ ಕರೆಕ್ಟಾಗಿ ನೋಡೋ ಈ ಕಟೌಟ್ನಾ.. ಕಿಡ್ ತರ ಕಾಣಿಸ್ತಾನಾ ನಿನ್ನ ಕಣ್ಣಿಗೆ?’ ಎಂದು ಮಾಸ್ ಡೈಲಾಗ್ ಹೊಡೆದಿದ್ದಾರೆ. </p><p>ಬಿಗ್ಬಾಸ್ ಸೀಸನ್ 12ರ ಮೂಲಕ ಅತಿ ಹೆಚ್ಚು ಗಮನ ಸೆಳೆದಿರುವ ಗಿಲ್ಲಿ ನಟ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಗಿಲ್ಲಿ ನಟ ಅವರು ಧನ್ವೀರ್ ಅವರ ಜೊತೆಗೆ ನಟಿಸಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. </p>.ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು ಜ. 31ಕ್ಕೆ ಬಿಡುಗಡೆ.ಮಾಸ್ ಲುಕ್ನಲ್ಲಿ ಧನ್ವೀರ್; ಮತ್ತೊಂದು ಸಿನಿಮಾಗೆ ಹಸಿರು ನಿಶಾನೆ.<p>ವಿಶೇಷ ಏನೆಂದರೆ ನಟ ದರ್ಶನ್ ಹುಟ್ಟುಹಬ್ಬದ ದಿನವೇ ಧನ್ವೀರ್ ಗೌಡ ಅವರು ತಮ್ಮ ಐದನೇ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್ಗೂ ಮುನ್ನ ಜೈಲಿನಲ್ಲಿರುವ ದರ್ಶನ್ ಅವರಿಗೆ ನುಡಿಗಳಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. </p><p>‘ಕಬ್ಬಿಣದ ಬಾಗಿಲುಗಳು ನಿಮ್ಮನ್ನು ದೂರ ಮಾಡಿರಬಹುದು. ಆದರೆ ಈ ಜನರ ಹೃದಯಗಳಲ್ಲಿ ನೀವು ಇನ್ನು ನಮ್ಮ ಹೆಮ್ಮೆಯಾಗಿ ಉಳಿದಿದ್ದೀರಿ. ಒಬ್ಬ ಮನುಷ್ಯನನ್ನು ಗೋಡೆಗಳ ಹಿಂದೆ ಇಡಬಹುದು. ಆದರೆ ಒಂದು ಹೆಸರನ್ನು ಪ್ರಭಾವವನ್ನು ಯಾರೂ ಬಂಧಿಸೋಕೆ ಸಾಧ್ಯ? ನೀವು ಇಂದು ಹೋರಾಟದಲ್ಲಿ ಇದ್ದೀರಿ. ಆದರೆ ಈ ಜನ, ಈ ಪ್ರೀತಿ, ಈ ನಂಬಿಕೆ ಕವಚವಾಗಿದೆ. ಕಾಲ ಪರೀಕ್ಷಿಸಬಹುದು. ಆದರೆ ಇತಿಹಾಸ ತೀರ್ಪು ಕೊಡುತ್ತದೆ. ಇದು ಅಂತ್ಯವಲ್ಲ. ಮಹಾ ಆರಂಭ. ದರ್ಶನ್ ಅಣ್ಣ ಎಂದರೆ ಕೇವಲ ಹೆಸರಲ್ಲ. ಲಕ್ಷಾಂತರ ಜನರಿಗೆ ಸ್ಫೂರ್ತಿ, ಧೈರ್ಯ, ಪ್ರೀತಿ ನಂಬಿಕೆ. ಈ ಹುಟ್ಟುಹಬ್ಬದಲ್ಲಿ ನಿಮಗೆ ಕಾಣದ ಪ್ರಪಂಚವೇ ನಿಮ್ಮ ಜಯಘೋಷದಿಂದ ತುಂಬಿದೆ. ಶುಭಾಶಯಗಳು ಅಣ್ಣ. ನೀವು ಕೇಲವ ನಟನಲ್ಲ ನೀವೊಂದು ಹೆಮ್ಮೆ’ ಎಂದು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.</p>.<p>ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ಗೆ ಜೋಡಿಯಾಗಿ ‘ಸಲಗ’ ಖ್ಯಾತಿಯ ಸಂಜನಾ ಆನಂದ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕನಿದ್ದು, ಅವರು ಯಾರು ಎಂದು ಚಿತ್ರ ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು ಎಂದಿದೆ ಚಿತ್ರತಂಡ. </p><p>‘ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್ ಇದೆ. ಪ್ರೀತಿ, ಭಾವನಾತ್ಮಕ ಅಂಶಗಳ ಜೊತೆಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕೈವ’ ಬಳಿಕ ಧನ್ವೀರ್ ನಟನೆಯಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರುವರಿ 27ರಂದು ಹಯಗ್ರೀವ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಈ ಸಿನಿಮಾದ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ.</p><p>ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ನಲ್ಲಿ ಹಯಗ್ರೀವ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಧನ್ವೀರ್ ಜೊತೆಗೆ ಗಿಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಧನ್ವೀರ್ ಅವರ ಹಿಂದೆ ನಿಂತುಕೊಂಡ ಗಿಲ್ಲಿ ನಟ ‘ಏಯ್ ಕರೆಕ್ಟಾಗಿ ನೋಡೋ ಈ ಕಟೌಟ್ನಾ.. ಕಿಡ್ ತರ ಕಾಣಿಸ್ತಾನಾ ನಿನ್ನ ಕಣ್ಣಿಗೆ?’ ಎಂದು ಮಾಸ್ ಡೈಲಾಗ್ ಹೊಡೆದಿದ್ದಾರೆ. </p><p>ಬಿಗ್ಬಾಸ್ ಸೀಸನ್ 12ರ ಮೂಲಕ ಅತಿ ಹೆಚ್ಚು ಗಮನ ಸೆಳೆದಿರುವ ಗಿಲ್ಲಿ ನಟ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಗಿಲ್ಲಿ ನಟ ಅವರು ಧನ್ವೀರ್ ಅವರ ಜೊತೆಗೆ ನಟಿಸಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. </p>.ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು ಜ. 31ಕ್ಕೆ ಬಿಡುಗಡೆ.ಮಾಸ್ ಲುಕ್ನಲ್ಲಿ ಧನ್ವೀರ್; ಮತ್ತೊಂದು ಸಿನಿಮಾಗೆ ಹಸಿರು ನಿಶಾನೆ.<p>ವಿಶೇಷ ಏನೆಂದರೆ ನಟ ದರ್ಶನ್ ಹುಟ್ಟುಹಬ್ಬದ ದಿನವೇ ಧನ್ವೀರ್ ಗೌಡ ಅವರು ತಮ್ಮ ಐದನೇ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್ಗೂ ಮುನ್ನ ಜೈಲಿನಲ್ಲಿರುವ ದರ್ಶನ್ ಅವರಿಗೆ ನುಡಿಗಳಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. </p><p>‘ಕಬ್ಬಿಣದ ಬಾಗಿಲುಗಳು ನಿಮ್ಮನ್ನು ದೂರ ಮಾಡಿರಬಹುದು. ಆದರೆ ಈ ಜನರ ಹೃದಯಗಳಲ್ಲಿ ನೀವು ಇನ್ನು ನಮ್ಮ ಹೆಮ್ಮೆಯಾಗಿ ಉಳಿದಿದ್ದೀರಿ. ಒಬ್ಬ ಮನುಷ್ಯನನ್ನು ಗೋಡೆಗಳ ಹಿಂದೆ ಇಡಬಹುದು. ಆದರೆ ಒಂದು ಹೆಸರನ್ನು ಪ್ರಭಾವವನ್ನು ಯಾರೂ ಬಂಧಿಸೋಕೆ ಸಾಧ್ಯ? ನೀವು ಇಂದು ಹೋರಾಟದಲ್ಲಿ ಇದ್ದೀರಿ. ಆದರೆ ಈ ಜನ, ಈ ಪ್ರೀತಿ, ಈ ನಂಬಿಕೆ ಕವಚವಾಗಿದೆ. ಕಾಲ ಪರೀಕ್ಷಿಸಬಹುದು. ಆದರೆ ಇತಿಹಾಸ ತೀರ್ಪು ಕೊಡುತ್ತದೆ. ಇದು ಅಂತ್ಯವಲ್ಲ. ಮಹಾ ಆರಂಭ. ದರ್ಶನ್ ಅಣ್ಣ ಎಂದರೆ ಕೇವಲ ಹೆಸರಲ್ಲ. ಲಕ್ಷಾಂತರ ಜನರಿಗೆ ಸ್ಫೂರ್ತಿ, ಧೈರ್ಯ, ಪ್ರೀತಿ ನಂಬಿಕೆ. ಈ ಹುಟ್ಟುಹಬ್ಬದಲ್ಲಿ ನಿಮಗೆ ಕಾಣದ ಪ್ರಪಂಚವೇ ನಿಮ್ಮ ಜಯಘೋಷದಿಂದ ತುಂಬಿದೆ. ಶುಭಾಶಯಗಳು ಅಣ್ಣ. ನೀವು ಕೇಲವ ನಟನಲ್ಲ ನೀವೊಂದು ಹೆಮ್ಮೆ’ ಎಂದು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.</p>.<p>ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ಗೆ ಜೋಡಿಯಾಗಿ ‘ಸಲಗ’ ಖ್ಯಾತಿಯ ಸಂಜನಾ ಆನಂದ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕನಿದ್ದು, ಅವರು ಯಾರು ಎಂದು ಚಿತ್ರ ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು ಎಂದಿದೆ ಚಿತ್ರತಂಡ. </p><p>‘ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್ ಇದೆ. ಪ್ರೀತಿ, ಭಾವನಾತ್ಮಕ ಅಂಶಗಳ ಜೊತೆಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>