ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿರಾಯನ ಬೆಡಗಿಯ ಮಾತು

Last Updated 26 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

‘ಹುಲಿರಾಯ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದವರು ತೀರ್ಥಹಳ್ಳಿಯ ಬೆಡಗಿ ದಿವ್ಯಾ ಉರುಡುಗ. ಈ ಚಿತ್ರದಲ್ಲಿ ಬಾಲುನಾಗೇಂದ್ರ ಜೊತೆ ಹೆಜ್ಜೆ ಹಾಕಿ ‘ಬಜಾರಿ ಹುಡುಗಿ ಅಂದ್ರೆ ಹೀಗಿರಬೇಕು’ ಅಂದುಕೊಳ್ಳುವಂತೆ ಮಾಡಿದ್ದರು ದಿವ್ಯಾ.

ಲಾಕ್‌ಡೌನ್‌ ಅವಧಿಯನ್ನು ತೀರ್ಥಹಳ್ಳಿಯಲ್ಲಿ ಕಳೆಯುತ್ತಿರುವ ಅವರು ‘ಪ್ರಜಾ ಪ್ಲಸ್’ ಜೊತೆ ಮಾತಿಗೆ ಸಿಕ್ಕಿದ್ದರು. ಇವರು ನಟಿಸಿರುವ ‘ರಾಂಚಿ’ ಚಿತ್ರ ಈ ವೇಳೆಗೆ ಬಿಡುಗಡೆಯಾಗಬೇಕಿತ್ತು.ಇದು ನೈಜ ಕಥೆ ಆಧರಿಸಿದ ಚಿತ್ರ. ಸಿನಿಮಾದ ಸರಿಸುಮಾರು ಅರ್ಧಭಾಗ ರಾಂಚಿಯಲ್ಲೇ ಚಿತ್ರೀಕರಣ ಆಗಿದೆಯಂತೆ. ಕೊರೊನಾ ಮಾರಿಯ ಕಾರಣದಿಂದಾಗಿ ಬಿಡುಗಡೆ ಯಾವಾಗ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ದಿವ್ಯಾ ಅವರ ಕೈಯಲ್ಲಿ ಈಗ ಮೂರು ಸಿನಿಮಾಗಳಿವೆ. ‘ವಿಜಯ ರಾಘವೇಂದ್ರ ಅವರ ಜೊತೆ ನಾನು ‘3ಬಿಎಚ್‌ಕೆ’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದನ್ನು ರವಿ–ಚೇತನ್‌ ನಿರ್ದೇಶಿಸುತ್ತಿದ್ದಾರೆ. ಇದು ಹಾರರ್ ಸಿನಿಮಾ. ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು. ಕೊನೆಯ ಹಂತದ ಒಂದೆರಡು ಕೆಲಸಗಳು ಮಾತ್ರ ಬಾಕಿಯಿವೆ’ ಎನ್ನುತ್ತಾರೆ. ಇವರು ನಟಿಸುತ್ತಿರುವ ‘ಗಿರ್ಕಿ’ ಸಿನಿಮಾಕ್ಕೆ ವಿಲೋಕ್ ರಾಜ್ ನಾಯಕ ನಟ. ಇದನ್ನು ನಿರ್ದೇಶಿಸಿರುವುದು ಯೋಗರಾಜ್‌ ಭಟ್ ಅವರ ಶಿಷ್ಯ ವೀರೇಶ್. ‘ಇದು ಥ್ರಿಲ್ಲರ್ ಸಿನಿಮಾ. ಇದರಲ್ಲಿ ನನ್ನದು ಕೆಳಮಧ್ಯಮ ವರ್ಗದ ಹುಡುಗಿಯ ಪಾತ್ರ. ಆ ವರ್ಗದವರ ಜೀವನ, ಅಲ್ಲಿನ ಪ್ರೀತಿಯನ್ನು ನನ್ನ ಪಾತ್ರ ಬಿಂಬಿಸುತ್ತದೆ. ಇದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ’ ಎಂದು ವಿವರಿಸುತ್ತಾರೆ.

ನಾಗಭೂಷಣ್ ನಿರ್ದೇಶನದ ಧನುಷ್ ನಾಯಕನಾಗಿ ನಟಿಸುತ್ತಿರುವ ‘ಜೋರು’ ಸಿನಿಮಾದಲ್ಲಿಯೂ ದಿವ್ಯಾ ಬಣ್ಣ ಹಚ್ಚಿದ್ದಾರೆ. ಇದು ಕಾಲೇಜು ಹುಡುಗ–ಹುಡುಗಿಯ ಕಥೆಯಂತೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಶೂಟಿಂಗ್‌ ನಡೆಸಲಾಗಿದೆ. ಜೊತೆಗೆ, ಇನ್ನೂ ಒಂದೆರಡು ಸಿನಿಮಾಗಳಲ್ಲಿ ನಟಿಸುವ ಕುರಿತು ಮಾತುಕತೆಯ ಹಂತದಲ್ಲಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT