<p>ಈ ಹಿಂದೆ ‘ರಾಜಹಂಸ’ ಚಿತ್ರದಲ್ಲಿ ನಟಿಸಿದ್ದ ಗೌರಿಶಂಕರ್ ಹಾಗೂ ಬಿಂದು ಶಿವರಾಂ ಜೋಡಿಯಾಗಿ ನಟಿಸಿರುವ ‘ಕೆರೆಬೇಟೆ’ ಚಿತ್ರದ ‘ಮಲೆನಾಡ ಗೊಂಬೆ’ ಎಂಬ ಹಾಡನ್ನು ಇತ್ತೀಚೆಗಷ್ಟೇ ನಟ ಉಪೇಂದ್ರ ಬಿಡುಗಡೆ ಮಾಡಿದರು.</p><p><br>‘ಚಿತ್ರದ ಟೀಸರ್ ನೋಡಿದೆ. ಬಹಳ ಚೆನ್ನಾಗಿದೆ. ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ. ಮಲೆನಾಡಿನ ಸುಂದರ ಚಿತ್ರಣವಿದೆ. ಈ ತಂಡ ಇನ್ನೊಂದಷ್ಟು ಸಿನಿಮಾ ಮಾಡುವ ರೀತಿಯಲ್ಲಿ ಹರಸಿ. ಚಿತ್ರಮಂದಿರಕ್ಕೇ ಬಂದು ಈ ಸಿನಿಮಾ ನೋಡಿ’ ಎಂದು ಉಪೇಂದ್ರ ತಂಡಕ್ಕೆ ಶುಭ ಹಾರೈಸಿದರು.</p>.<p>ಈಗಾಗಲೇ ಟೀಸರ್ನಿಂದ ಗಮನ ಸೆಳೆದಿರುವ ಈ ಚಿತ್ರಕ್ಕೆ ರಾಜ್ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಮಲೆನಾಡ ಗೊಂಬೆ’ ಹಾಡಿನಲ್ಲಿ ನಾಯಕ–ನಾಯಕಿ ಪ್ರೇಮ ಪಯಣದ ಜೊತೆಗೆ ಮಲೆನಾಡಿ ದೃಶ್ಯವೈಭವವಿದೆ. ಗಗನ್ ಬದೇರಿಯ ಸಂಗೀತವಿದ್ದು, ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.</p>.<p>‘ಸಿಗಂದೂರು, ಕೋಗಾರಿನ ಕಾಡು ಸೇರಿದಂತೆ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಬಾರೀ ಮಳೆ, ಕಾಲಿನ ರಕ್ತ ಹೀರುವ ಜಿಗಣಿಗಳ ನಡುವೆ ಈ ಹಾಡಿನ ಚಿತ್ರೀಕರಣ ಒಂದು ಅನನ್ಯ ಅನುಭವವಾಗಿತ್ತು. ಮಾ.15 ರಂದು ಸಿನಿಮಾ ತೆರೆಗೆ ಬರುತ್ತಿದೆ’ ಎಂದರು ಗೌರಿಶಂಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈ ಹಿಂದೆ ‘ರಾಜಹಂಸ’ ಚಿತ್ರದಲ್ಲಿ ನಟಿಸಿದ್ದ ಗೌರಿಶಂಕರ್ ಹಾಗೂ ಬಿಂದು ಶಿವರಾಂ ಜೋಡಿಯಾಗಿ ನಟಿಸಿರುವ ‘ಕೆರೆಬೇಟೆ’ ಚಿತ್ರದ ‘ಮಲೆನಾಡ ಗೊಂಬೆ’ ಎಂಬ ಹಾಡನ್ನು ಇತ್ತೀಚೆಗಷ್ಟೇ ನಟ ಉಪೇಂದ್ರ ಬಿಡುಗಡೆ ಮಾಡಿದರು.</p><p><br>‘ಚಿತ್ರದ ಟೀಸರ್ ನೋಡಿದೆ. ಬಹಳ ಚೆನ್ನಾಗಿದೆ. ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ. ಮಲೆನಾಡಿನ ಸುಂದರ ಚಿತ್ರಣವಿದೆ. ಈ ತಂಡ ಇನ್ನೊಂದಷ್ಟು ಸಿನಿಮಾ ಮಾಡುವ ರೀತಿಯಲ್ಲಿ ಹರಸಿ. ಚಿತ್ರಮಂದಿರಕ್ಕೇ ಬಂದು ಈ ಸಿನಿಮಾ ನೋಡಿ’ ಎಂದು ಉಪೇಂದ್ರ ತಂಡಕ್ಕೆ ಶುಭ ಹಾರೈಸಿದರು.</p>.<p>ಈಗಾಗಲೇ ಟೀಸರ್ನಿಂದ ಗಮನ ಸೆಳೆದಿರುವ ಈ ಚಿತ್ರಕ್ಕೆ ರಾಜ್ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಮಲೆನಾಡ ಗೊಂಬೆ’ ಹಾಡಿನಲ್ಲಿ ನಾಯಕ–ನಾಯಕಿ ಪ್ರೇಮ ಪಯಣದ ಜೊತೆಗೆ ಮಲೆನಾಡಿ ದೃಶ್ಯವೈಭವವಿದೆ. ಗಗನ್ ಬದೇರಿಯ ಸಂಗೀತವಿದ್ದು, ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.</p>.<p>‘ಸಿಗಂದೂರು, ಕೋಗಾರಿನ ಕಾಡು ಸೇರಿದಂತೆ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಬಾರೀ ಮಳೆ, ಕಾಲಿನ ರಕ್ತ ಹೀರುವ ಜಿಗಣಿಗಳ ನಡುವೆ ಈ ಹಾಡಿನ ಚಿತ್ರೀಕರಣ ಒಂದು ಅನನ್ಯ ಅನುಭವವಾಗಿತ್ತು. ಮಾ.15 ರಂದು ಸಿನಿಮಾ ತೆರೆಗೆ ಬರುತ್ತಿದೆ’ ಎಂದರು ಗೌರಿಶಂಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>