ಈ ಹಿಂದೆ ‘ರಾಜಹಂಸ’ ಚಿತ್ರದಲ್ಲಿ ನಟಿಸಿದ್ದ ಗೌರಿಶಂಕರ್ ಹಾಗೂ ಬಿಂದು ಶಿವರಾಂ ಜೋಡಿಯಾಗಿ ನಟಿಸಿರುವ ‘ಕೆರೆಬೇಟೆ’ ಚಿತ್ರದ ‘ಮಲೆನಾಡ ಗೊಂಬೆ’ ಎಂಬ ಹಾಡನ್ನು ಇತ್ತೀಚೆಗಷ್ಟೇ ನಟ ಉಪೇಂದ್ರ ಬಿಡುಗಡೆ ಮಾಡಿದರು.
‘ಚಿತ್ರದ ಟೀಸರ್ ನೋಡಿದೆ. ಬಹಳ ಚೆನ್ನಾಗಿದೆ. ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ. ಮಲೆನಾಡಿನ ಸುಂದರ ಚಿತ್ರಣವಿದೆ. ಈ ತಂಡ ಇನ್ನೊಂದಷ್ಟು ಸಿನಿಮಾ ಮಾಡುವ ರೀತಿಯಲ್ಲಿ ಹರಸಿ. ಚಿತ್ರಮಂದಿರಕ್ಕೇ ಬಂದು ಈ ಸಿನಿಮಾ ನೋಡಿ’ ಎಂದು ಉಪೇಂದ್ರ ತಂಡಕ್ಕೆ ಶುಭ ಹಾರೈಸಿದರು.