ಚಿರಂತನ ತಂಡವು ಆರಂಭದಲ್ಲಿ ‘ಶಿವ–ಶಕ್ತಿ’ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರೆ, ಬೆಂಗಳೂರಿನ ‘ಥಾಟ್’ ತಂಡ ಕಥಕ್ ಮೂಲಕ ರಂಜಿಸಿತು. ಮುಂಬೈಯ ಷಣ್ಮುಖಪ್ರಿಯ ತಂಡವು ಒಡಿಸ್ಸಿ ನೃತ್ಯದ ಸೊಗಡು ತೋಡಿಸಿದರೆ, ಹೈದರಾಬಾದ್ ಲಾಸ್ಯ ಲಹರಿ ತಂಡ ಕೂಚಪುಡಿಯ ನೃತ್ಯದ ಸೊಬಗು ಪ್ರದರ್ಶಿಸಿತು. ಇದಕ್ಕೆ ಚಿರಂತನ ತಂಡದ ವಾದ್ಯ ವೈವಿಧ್ಯ (ಸಿಂಫೋನಿ), ಬೆಂಗಳೂರಿನ ರೇವತಿ ಕಾಮತ್ ತಂಡದ ವೀಣಾ ವಾದನ ಸಾತ್ ನೀಡಿತು.