ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಜಯ್ ಯಾಡ್ಲಿನಾ ಸಂಗೀತ ಸಂಯೋಜಿಸಿದ್ದಾರೆ. ಸೂರಿ ಸಿನಿಟೆಕ್ ಅವರ ಛಾಯಾಗ್ರಹಣವಿದೆ. ಹಿನ್ನೆಲೆ ಸಂಗೀತ ಗೌತಮ್ ಶ್ರೀವತ್ಸ ಅವರದ್ದು. ಮೈತ್ರಿ ಮಂಜುನಾಥ್ ಬಂಡವಾಳ ಹೂಡಿದ್ದಾರೆ.ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜನವರಿ ತಿಂಗಳ ಕೊನೆಯ ವಾರದ ಥಿಯೇಟರ್ಗೆ ಬರಲು ಚಿತ್ರತಂಡ ಯೋಜನೆ ರೂಪಿಸಿದೆ.