ನನ್ನ ಬಗ್ಗೆ ಕೋಪ ಮಾಡಿಕೊಳ್ಳದೇರಜನಿ ಅಭಿಮಾನಿಗಳುಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ. ಎಲ್ಲರಂತೆ ರಜನಿಕಾಂತ್ ಆರೋಗ್ಯವಾಗಿರಬೇಕು ಎಂದು ನಾನು ಬಯಸುತ್ತೇನೆ. ಆದರೆ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರಿಗೆ ಏನಾಗಿದೆ ಎಂಬುದನ್ನು ತಿಳಿಯಲು ಆಗ ಜನರು ಬಯಸಿದ್ದರು. ಕೊನೆಯವರೆಗೂ ಅದು ಗೌಪ್ಯವಾಗಿಯೇ ಉಳಿಯಿತು. ಈಗ ರಜನಿಕಾಂತ್ಗೆ ಏನಾಗಿದೆ ಎಂದು ತಿಳಿಯಲು ನಾನು ಬಯಸುತ್ತೇನೆ, ಅವರ ಅಭಿಮಾನಿಯಾಗಿ ರಜನಿ ಸದಾ ಆರೋಗ್ಯವಾಗಿರಬೇಕು ಎಂಬುದೇ ನನ್ನ ಆಸೆ ಎಂದು ಕಸ್ತೂರಿ ಶಂಕರ್ ಪೋಸ್ಟ್ ಮಾಡಿದ್ದಾರೆ.