ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ನಟ ಧ್ರುವ ಸರ್ಜಾ ನಡುವೆ ಎದ್ದಿದ್ದ ಮನಸ್ತಾಪದ ಬಗ್ಗೆ ಕೊನೆಗೂ ಧ್ರುವಾ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಧ್ರುವ ಸರ್ಜಾ ದರ್ಶನ್ ಬಳಿ ಕೇಳಬೇಕಾದ ಪ್ರಶ್ನೆಗಳಿವೆ ಅದನ್ನು ಅವರ ಬಳಿಯೇ ಕೇಳುತ್ತೇನೆ ಎಂದಿದ್ದಾರೆ.