ಮುಂಬೈ: ಶಿವಸೇನಾ ನಾಯಕರೊಂದಿಗೆ ಕಳೆದ ಕೆಲವು ದಿನಗಳಿಂದ ವಾಗ್ವಾದ ನಡೆಸುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್, ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿ ಕಟ್ಟಡ ಕುಸಿದು ಕನಿಷ್ಠ 10 ಜನರು ಮೃತಪಟ್ಟ ಬಳಿಕ ಸೋಮವಾರ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು ಮೂರು ಅಂತಸ್ತಿನ ಕಟ್ಟಡದ ಕುಸಿತದ ಬಗ್ಗೆ ಲೇಖನವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಕಂಗನಾ ಟೀಂಗೆ ಟ್ಯಾಗ್ ಮಾಡಿದ ಬಳಿಕ ಅದನ್ನು ರೀಟ್ವೀಟ್ ಮಾಡಿರುವ ಕಂಗನಾ, ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರವು क-क-क-क-कंगना ..... ನನ್ನನ್ನು ನಿರಂತರವಾಗಿ ಪೀಡಿಸುವುದನ್ನು ನಿಲ್ಲಿಸಿದರೆ ಇಡೀ ರಾಜ್ಯವು ಹೇಗೆ ಕುಸಿಯುತ್ತಿದೆ ಎಂಬುದು ಅವರಿಗೆ ತಿಳಿಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
Meanwhile Maharashtra government क-क-क-क-कंगना ..... if they stop being obsessed with me they will know how the entire state is collapsing. https://t.co/qSUBGApLLA
ನೋವಿನ ದೃಶ್ಯಗಳು! ಮಹಾರಾಷ್ಟ್ರ ಸರ್ಕಾರಕ್ಕೆ ಕಂಗನಾ ತಂಡದ ಕಚೇರಿಯನ್ನು ಕೆಡವಲು ಮಾತ್ರ ಸಮಯವಿದ್ದಾಗ ಈ ರೀತಿಯ ಅವಘಡಗಳು ಸಂಭವಿಸುತ್ತವೆ ಎಂದು ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದರು.