‘15 ಬಾರಿ ಜೋಗದ ಗುಂಡಿಗೆ ಇಳಿದು, 11 ಶವಗಳನ್ನು ಪತ್ತೆಹಚ್ಚಿರುವ ಸಮಾಜ ಸೇವೆಯನ್ನು ಮಾಡಿದ ಕ್ಷಣಗಳನ್ನು ನಿರ್ಮಾಪಕರೊಂದಿಗೆ ಹಂಚಿಕೊಂಡು, ಸಿನಿಮಾದ ಕಥೆಯಲ್ಲಿ ಅಳವಡಿಸಿಕೊಂಡಿದ್ದೇವೆ. ಆಯ ತಪ್ಪಿ ಜೋಗದ ಗುಂಡಿಯಲ್ಲಿ ರಾತ್ರಿಯೊಂದನ್ನು ಕಳೆದ ಕರಾಳ ಕಥೆಯನ್ನು ಚಿತ್ರಕಥೆಯಲ್ಲಿ ಸೇರಿಸಲಾಗಿದೆ’ ಎಂದು ಜ್ಯೋತಿರಾಜ್ ತಿಳಿಸಿದರು.