ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನ್ಯಾಯ ಆಗಿರುವುದು ಸಮಾಜದ ಸಾಮಾನ್ಯರಿಗೆ. ವೈಯಕ್ತಿಕ ದ್ವೇಷದಿಂದ ಅಥವಾ ಯಾವುದೇ ವ್ಯಕ್ತಿಯ ತೇಜೋವಧೆ ಮಾಡಲು ನಾನು ಮಾತನಾಡುತ್ತಿಲ್ಲ. ಸಮಾಜದ ಹಿತದೃಷ್ಟಿಯಿಂದ ಕ್ಷಮೆ ಕೇಳಿ. ಕುಮಾರಸ್ವಾಮಿ ಅವರಿಗಾಗಲಿ ಅಥವಾ ಸಿದ್ದರಾಮಯ್ಯನವರಿಗಾಗಲಿ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೆಸರನ್ನು ಮಾಧ್ಯಮ ಪ್ರಸ್ತಾಪ ಮಾಡಬಾರದು. ನನಗೆ ಯಾರೂ ಕುಮ್ಮಕ್ಕು ನೀಡಿಲ್ಲ’ ಎಂದಿದ್ದಾರೆ.