ಅಂದಹಾಗೆ ಈ ಚಿತ್ರ ನಿರ್ದೇಶಿಸಿರುವುದು ಶ್ರೀನರಸಿಂಹ. ಅವರು ಕಾಶೀನಾಥ್ ಅವರ ಶಿಷ್ಯ. ಇದು ಅವರ ಮೊದಲ ಚಿತ್ರವೂ ಹೌದು. ನಟ ದರ್ಶನ್ ಕೂಡ ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೋಕರ್ಣ, ಪಾಂಡವಪುರ, ಬೆಂಗಳೂರು ಮತ್ತು ಕಾರವಾರದ ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ ಮಾರ್ಚ್ನಲ್ಲಿ ಜನರ ಮುಂದೆ ಬರಲು ಸಿದ್ಧತೆ ನಡೆಸಿದೆ.