<p>ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯರ್ ಈದ್ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ‘ಕಯಟ್ಟಂ’ನ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.</p>.<p>‘ಕಯಟ್ಟಂ’ ಎಂದರೆ ‘ಏರುವುದು’ ಎಂದು ಅರ್ಥ. ಈ ಪದಕ್ಕೂ ಅವರು ಹಿಮದ ಮೇಲೆ ಕುಳಿತಿರುವ ದೃಶ್ಯಕ್ಕೂ ಹೋಲಿಸಿದರೆ, ಇದೊಂದು ಹಿಮಶಿಖರಏರುವ ಚಾರಣಿಗರ ಕಥೆ ಇದ್ದಂತೆ ಕಾಣುತ್ತಿದೆ. ಆದರೆ, ಸಿನಿಮಾ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.</p>.<p>ಈ ಸಿನಿಮಾದ ಬಹುತೇಕ ಚಿತ್ರೀಕರಣ ಹಿಮಾಚಲಪ್ರದೇಶದ ಸುತ್ತಮುತ್ತ ಸ್ಥಳಗಳಲ್ಲಿ ನಡೆದಿದೆ. ಹಿಮಪ್ರದೇಶದಲ್ಲಿ ಶೂಟಿಂಗ್ ನಡೆಯುವಾಗ ದಿಢೀರನೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಪ್ರವಾಹ ಉಂಟಾಯಿತು. ಈ ಸಮಯದಲ್ಲಿ ಮೂವತ್ತು ಸದಸ್ಯರನ್ನೊಳಗೊಂಡ ಚಿತ್ರತಂಡ ಹಳ್ಳಿಯೊಂದರಲ್ಲಿ ಸಿಕ್ಕಿಕೊಂಡಿತು. ಒಂದು ವಾರ ಅದೇ ಹಳ್ಳಿಯಲ್ಲಿ ನೆಲಸಿತ್ತು.</p>.<p>ಈ ಸಂದರ್ಭದಲ್ಲಿ ಮಂಜು ವಾರಿಯರ್ ಅವರ ಸಹೋದರ ಮಧು ವಾರಿಯರ್, ಟಿ.ವಿ ಚಾನೆಲ್ಗಳ ಮೂಲಕ ಸಹೋದರಿ ಹಾಗೂ ತಂಡವನ್ನು ಅಪಾಯದಿಂದ ಪಾರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಅವರನ್ನು ಮನಾಲಿಗೆ ಸುರಕ್ಷಿತವಾಗಿ ಕರೆತರಲಾಗಿತ್ತು.</p>.<p>‘ಕಯಟ್ಟಂ’ ಸಿನಿಮಾಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದವರು ಸನಲ್ ಕುಮಾರ್ ಶಶಿಧರನ್. ಮಂಜು ವಾರಿಯರ್ ಚಿತ್ರಕ್ಕೆ ಬಂಡವಾಳ ಹೂಡಿ, ಸಿನಿಮಾ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಇವರೊಂದಿಗೆ ಶಾಜಿ ಮ್ಯಾಥ್ಯೂ ಹಾಗೂ ಅರುಣಾ ಮ್ಯಾಥ್ಯೂ ಕೂಡ ಬಂಡವಾಳ ಹೂಡಿದ್ದಾರೆ.</p>.<p>ಮಂಜು ವಾರಿಯರ್ ‘ಮರಕ್ಕಾರ್ ಅರಬಿ ಕಡಲಿಂಟೆ ಸಿಂಹಮ್’, ‘ಜಾಕ್ ಆ್ಯಂಡ್ ಜಿಲ್’, ‘ಚತುರ್ಮುಗಂ’, ಹಾಗೂ ‘ಲಲಿತಂ ಸುಂದರಂ’ ಚಿತ್ರಗಳಲ್ಲೂ ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯರ್ ಈದ್ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ‘ಕಯಟ್ಟಂ’ನ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.</p>.<p>‘ಕಯಟ್ಟಂ’ ಎಂದರೆ ‘ಏರುವುದು’ ಎಂದು ಅರ್ಥ. ಈ ಪದಕ್ಕೂ ಅವರು ಹಿಮದ ಮೇಲೆ ಕುಳಿತಿರುವ ದೃಶ್ಯಕ್ಕೂ ಹೋಲಿಸಿದರೆ, ಇದೊಂದು ಹಿಮಶಿಖರಏರುವ ಚಾರಣಿಗರ ಕಥೆ ಇದ್ದಂತೆ ಕಾಣುತ್ತಿದೆ. ಆದರೆ, ಸಿನಿಮಾ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.</p>.<p>ಈ ಸಿನಿಮಾದ ಬಹುತೇಕ ಚಿತ್ರೀಕರಣ ಹಿಮಾಚಲಪ್ರದೇಶದ ಸುತ್ತಮುತ್ತ ಸ್ಥಳಗಳಲ್ಲಿ ನಡೆದಿದೆ. ಹಿಮಪ್ರದೇಶದಲ್ಲಿ ಶೂಟಿಂಗ್ ನಡೆಯುವಾಗ ದಿಢೀರನೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಪ್ರವಾಹ ಉಂಟಾಯಿತು. ಈ ಸಮಯದಲ್ಲಿ ಮೂವತ್ತು ಸದಸ್ಯರನ್ನೊಳಗೊಂಡ ಚಿತ್ರತಂಡ ಹಳ್ಳಿಯೊಂದರಲ್ಲಿ ಸಿಕ್ಕಿಕೊಂಡಿತು. ಒಂದು ವಾರ ಅದೇ ಹಳ್ಳಿಯಲ್ಲಿ ನೆಲಸಿತ್ತು.</p>.<p>ಈ ಸಂದರ್ಭದಲ್ಲಿ ಮಂಜು ವಾರಿಯರ್ ಅವರ ಸಹೋದರ ಮಧು ವಾರಿಯರ್, ಟಿ.ವಿ ಚಾನೆಲ್ಗಳ ಮೂಲಕ ಸಹೋದರಿ ಹಾಗೂ ತಂಡವನ್ನು ಅಪಾಯದಿಂದ ಪಾರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಅವರನ್ನು ಮನಾಲಿಗೆ ಸುರಕ್ಷಿತವಾಗಿ ಕರೆತರಲಾಗಿತ್ತು.</p>.<p>‘ಕಯಟ್ಟಂ’ ಸಿನಿಮಾಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದವರು ಸನಲ್ ಕುಮಾರ್ ಶಶಿಧರನ್. ಮಂಜು ವಾರಿಯರ್ ಚಿತ್ರಕ್ಕೆ ಬಂಡವಾಳ ಹೂಡಿ, ಸಿನಿಮಾ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಇವರೊಂದಿಗೆ ಶಾಜಿ ಮ್ಯಾಥ್ಯೂ ಹಾಗೂ ಅರುಣಾ ಮ್ಯಾಥ್ಯೂ ಕೂಡ ಬಂಡವಾಳ ಹೂಡಿದ್ದಾರೆ.</p>.<p>ಮಂಜು ವಾರಿಯರ್ ‘ಮರಕ್ಕಾರ್ ಅರಬಿ ಕಡಲಿಂಟೆ ಸಿಂಹಮ್’, ‘ಜಾಕ್ ಆ್ಯಂಡ್ ಜಿಲ್’, ‘ಚತುರ್ಮುಗಂ’, ಹಾಗೂ ‘ಲಲಿತಂ ಸುಂದರಂ’ ಚಿತ್ರಗಳಲ್ಲೂ ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>