ಇದು ನಾಯಕಿಯ ಅಭಿನಯಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿರುವ ಸಿನಿಮಾ. ಇದರಲ್ಲಿ ನಾಯಕಿಯು ತನಗಾದ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕಥೆ ಇದೆಯಂತೆ. ಒಂದಿಷ್ಟು ಆ್ಯಕ್ಷನ್ ಕೂಡ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರವಿ ಕಾಳೆ, ಡ್ಯಾನಿ ಕುಟ್ಟಪ್ಪ, ಬಾಲಿವುಡ್ ನಟ ಮುಕೇಶ್ ರಿಷಿ ಕೂಡ ಇದರಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ರಾಜೇಶ್ ಕುಮಾರ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆಗಸ್ಟ್ 29ರಂದು ಚಿತ್ರದ ಮುಹೂರ್ತ ನಡೆಯಲಿದೆ.