‘ಕಾರ್ನಿ’ ಎಂದರೆ ದುರ್ಗಾದೇವಿಯ ಕೈಯಲ್ಲಿರುವ ಅಸ್ತ್ರದ ಹೆಸರು. ಇದೇ ಹೆಸರಿನಡಿ ಈಗ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ವಿನೋದ್ ಕುಮಾರ್ ಈ ಚಿತ್ರದ ನಿರ್ದೇಶಕ. ತೊಂಬತ್ತರ ದಶಕದಲ್ಲಿ ದಿನೇಶ್ಬಾಬು ‘ಇದು ಸಾಧ್ಯ’ ಎಂಬಡಾರ್ಕ್ ಥ್ರಿಲ್ಲರ್ ಚಿತ್ರ ನಿರ್ದೇಶಿಸಿದ್ದರು. ‘ಕಾರ್ನಿ’ಗೂ ಈ ಚಿತ್ರವೇ ಪ್ರೇರಣೆಯಂತೆ. ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಈ ತಿಂಗಳಾಂತ್ಯಕ್ಕೆ ತೆರೆಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.